‘ಆರೋಪಿಗಳು ಪಾದಚಾರಿಗಳನ್ನು ಗುರಿಯಾಗಿಸಿ, ಮೊಬೈಲ್ ಕಸಿದು ಪರಾರಿ ಆಗುತ್ತಿದ್ದರು. ಎಚ್.ಕೆ.ಸಿದ್ದೇಶ್ ಎಂಬುವವರು ಇಂದಿರಾನಗರದ ಅರ್ಥರ್ ಶೋರೂಂ ಬಳಿ ರಸ್ತೆ ಬದಲಿಯಲ್ಲಿ ಆಟೊವನ್ನು ನಿಲುಗಡೆ ಮಾಡಿ ಮುಂಜಾನೆ ನಾಲ್ಕರ ಸುಮಾರಿಗೆ ನಿದ್ರೆಗೆ ಜಾರಿದ್ದರು. ಅಲ್ಲಿಗೆ ಬಂದಿದ್ದ ಇಬ್ಬರು ಆರೋಪಿಗಳು, ಮೊಬೈಲ್ ಕಸಿದು ಪರಾರಿಯಾಗಿದ್ದರು. ಸಿದ್ದೇಶ್ ಅವರು ಬೇರೊಬ್ಬರ ಮೊಬೈಲ್ ಪಡೆದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದಿದ್ದ ಹೊಯ್ಸಳ ಸಿಬ್ಬಂದಿ ಇಬ್ಬರು ಕಳ್ಳರನ್ನು ಬೆನ್ನಟ್ಟಿ ಹಿಡಿದು ಮೊಬೈಲ್ ಜಪ್ತಿ ಮಾಡಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.