ಒಂದು ವರ್ಷದಿಂದ ಅಶೋಕ್ ಅಂಗಡಿಯಲ್ಲಿ ಬಿಸ್ವಾಥ್ ರಾಯ್ ಚಿನ್ನದ ಆಭರಣ ತಯಾರಿಸುವ ಕೆಲಸ ಮಾಡುತ್ತಿದ್ದ. ಚಿನ್ನದ ಸರ ಮಾಡಿಕೊಡುವಂತೆ ಅಶೋಕ್ ಅವರು ಮೇ 9ರಂದು ಬೆಳಿಗ್ಗೆ 11 ಗಂಟೆಗೆ 68 ಗ್ರಾಂ ಚಿನ್ನದ ಗಟ್ಟಿಯನ್ನು ಬಿಸ್ವಾಥ್ಗೆ ನೀಡಿದ್ದರು. ಆದರೆ, 11ರಂದು ಆತ ಸಂಪರ್ಕಕ್ಕೆ ಸಿಗದಿದ್ದಾಗ, ಪರಾರಿಯಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ.