‘ಇವರೆಲ್ಲಾ ಗುರುವಾರ ರಾತ್ರಿ ಬಾರ್ವೊಂದರಲ್ಲಿ ವಿಪರೀತ ಕುಡಿದಿದ್ದರು. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಕೈ ಕೈ ಮಿಲಾಯಿಸಿದ್ದರು. ಅಲ್ಲಿದ್ದವರು ಜಗಳ ಬಿಡಿಸಿ ಎರಡೂ ಕಡೆಯವರನ್ನು ಹೊರಗೆ ಕಳಿಸಿದ್ದರು. ಮಳೆ ಸುರಿಯುತ್ತಿದ್ದ ಕಾರಣ ಬಾಲಾಜಿ ಅವರು ಬಾರ್ನಿಂದ ಸ್ಪಲ್ಪ ದೂರ ಹೋಗಿ ನಿಂತಿದ್ದರು. ಅಲ್ಲಿಗೆ ಹೋಗಿದ್ದ ಮಹೇಶ್ ಮತ್ತು ನಾಗರಾಜ್ ಮತ್ತೆ ಜಗಳ ತೆಗೆದಿದ್ದರು. ಮಾತಿಗೆ ಮಾತು ಬೆಳೆದಿತ್ತು. ಸಿಟ್ಟಿಗೆದ್ದ ಮಹೇಶ್ ಹೆಲ್ಮೆಟ್ನಿಂದ ಬಾಲಾಜಿ ತಲೆಗೆ ಬಲವಾಗಿ ಹೊಡೆದಿದ್ದರು. ಪ್ರಜ್ಞೆ ತಪ್ಪಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲೇ ಅವರ ಉಸಿರು ನಿಂತಿತ್ತು’ ಎಂದು ವಿವರಿಸಿದರು.