‘ಬ್ಯಾಟರಾಯಪುರದ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿ ಶೇಖ್ ಸಲಾಂ ಅವರು ಭಜ್ಜಿ–ಬೋಂಡಾ ಅಂಗಡಿ ಇಟ್ಟಿದ್ದಾರೆ. ನಿತ್ಯ ಅಲ್ಲಿ ಭಜ್ಜಿ–ಬೊಂಡಾ ತಿಂದು ₹50 ಮೌಲ್ಯದ ಭಜ್ಜಿ–ಬೋಂಡಾ ಪಾರ್ಸೆಲ್ ಸಹ ಕಟ್ಟಿಸಿಕೊಳ್ಳುತ್ತಿದ್ದರು. ಹಣ ಕೇಳಿದಾಗ, ‘ನಾನು ಕೊಡಿಗೇಹಳ್ಳಿ ಪೊಲೀಸ್. ನೀನು ಇಲ್ಲಿ ಅಂಗಡಿ ನಡೆಸಬೇಕಾದರೆ, ನಾನು ಬಂದಾಗಲೆಲ್ಲ ಭಜ್ಜಿ–ಬೋಂಡಾ ನೀಡಬೇಕು’ ಎಂದು ಬೆದರಿಸಿದ್ದರು’ ಎಂದರು.