‘ಹಲವು ವ್ಯಾಪಾರಿಗಳುಉದ್ಯಾನವೆಲ್ಲ ಸಂಚರಿಸಿ ಅನಧಿಕೃತವಾಗಿ ಟೀ ಮಾರುತ್ತಾರೆ. ಟೀಕುಡಿಯುವ ವೇಳೆ ಕೆಲವರು ಉದ್ಯಾನದಲ್ಲೇ ಕೂತು ಧೂಮಪಾನ ಮಾಡುತ್ತಾರೆ. ಟೀ ಕುಡಿದ ನಂತರ ಪ್ಲಾಸ್ಟಿಕ್ ಕಪ್ಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಉದ್ಯಾನದ ಸ್ವಚ್ಛತೆಗೆ ಧಕ್ಕೆ ತರುತ್ತಾರೆ. ಧೂಮಪಾನದಿಂದ ಉದ್ಯಾನಕ್ಕೆ ಭೇಟಿ ನೀಡುವವರಿಗೂ ಕಿರಿಕಿರಿಯಾಗುತ್ತಿತ್ತು. ಈ ನಿಟ್ಟಿನಲ್ಲಿ ಕಾಫಿ, ಟೀ ಮಾರಾಟ ನಿಷೇಧಿಸಿದ್ದೇವೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ (ಕಬ್ಬನ್ ಉದ್ಯಾನ) ಜಿ.ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.