ಇನಾಯತ್, ಬೆಳ್ಳಹಳ್ಳಿ ಜಂಕ್ಷನ್ನಲ್ಲಿ ತಳ್ಳುವ ಗಾಡಿಯಲ್ಲಿ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದಾರೆ. ಮಾರ್ಚ್ 12ರಂದು ಬೆಳಿಗ್ಗೆ ಅಡುಗೆ ಅನಿಲದ ಸಿಲಿಂಡರ್ ತಂದು ತಮ್ಮ ಗಾಡಿ ಪಕ್ಕದಲ್ಲಿ ಇರಿಸಿ ಇನ್ನೊಂದು ಸಿಲಿಂಡರ್ ತರಲು ತೆರಳಿದ್ದರು. ಇದೇ ಸಮಯಕ್ಕೆ ಶೇಕ್ ನವೀದ್ ತಮ್ಮ ದ್ವಿಚಕ್ರ ವಾಹನದಲ್ಲಿ ಜಂಕ್ಷನ್ ಕಡೆಯಿಂದ ಹೆಗಡೆನಗರದ ಕಡೆಗೆ ತೆರಳುತ್ತಿದ್ದರು. ಈ ವೇಳೆ, ತಳ್ಳುವ ಗಾಡಿ ಬಳಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದು ಕಾಣಿಸಿದೆ. ತಕ್ಷಣ ಬೈಕ್ ನಿಲ್ಲಿಸಿ, ಮ್ಯಾಟ್ ತೆಗೆದುಕೊಂಡು ಬೆಂಕಿ ನಂದಿಸಲು ಮುಂದಾಗಿದ್ದಾರೆ.