<p><strong>ಬೆಂಗಳೂರು</strong>: ' ನಗರದಲ್ಲಿ ಎಲ್ಲೂ ರಸ್ತೆ ಗುಂಡಿಗಳು ಇರಬಾರದು. ಯಾರಿಗೂ ಅಪಾಯ ಆಗಬಾರದು ಎಂಬುದು ನಮ್ಮ ಕಾಳಜಿ' ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ತಿಳಿಸಿದರು.</p><p>ರಸ್ತೆ ಗುಂಡಿಗಳ ದುರಸ್ತಿಯನ್ನು ಪರಿಶೀಲಿಸಲು ಸೋಮವಾರ ತಡರಾತ್ರಿ ನಗರ ಸಂಚಾರ ಆರಂಭಿಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.<br></p><p>‘ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ 400 ಅಧಿಕಾರಿಗಳು, ಎಂಜಿನಿಯರ್ಗಳಿಗೆ ರಸ್ತೆಗಿಳಿದು ಗುಂಡಿ ಮುಚ್ಚಲು ಸೂಚಿಸಿದ್ದೆ. 15 ದಿನ ಗಡುವು ನೀಡಿದ್ದೆ. 14,307 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ವರದಿ ನೀಡಿದ್ದಾರೆ. ಅದನ್ನು ರಸ್ತೆಗಳಲ್ಲಿ ಸಂಚರಿಸಿ ನಾನೇ ಪರಿಶೀಲಿಸುತ್ತಿದ್ದೇನೆ' ಎಂದು ತಿಳಿಸಿದರು.</p><p>‘ನಗರದಲ್ಲಿ ಈ ಹಿಂದೆ ರಸ್ತೆ ಹೇಗಿತ್ತು, ಈಗ ಹೇಗಿವೆ ಎಂಬ ವರದಿ ನೀಡಿದ್ದಾರೆ. ಇದು ಒಂದು ದಾಖಲೆಯ ಕೆಲಸ. ಹೀಗಿದ್ದರೂ ರಸ್ತೆ ಗುಂಡಿ ದುರಸ್ತಿ ಮಾಡುವಲ್ಲಿ ಯಾರಾದರೂ ನಿರ್ಲಕ್ಷ್ಯ ತೋರಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ನಾನು ಮುಖ್ಯ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದರು.<br>‘ಬಿಬಿಎಂಪಿ ಅಧಿಕಾರಿಗಳು ನೀಡಿರುವ ವರದಿಯನ್ನು ನಾನು ಒಪ್ಪುವುದಿಲ್ಲ.ನಾನೇ ಪರಿಶೀಲನೆ ಮಾಡುತ್ತೇನೆ. ಇದು ಮೊದಲ ಹಂತ. ನನ್ನ ಕಾಲೇಜಿನ ಸಮಯದ ಬೈಕ್ ಸಿದ್ಧ ಮಾಡಿಸಿದ್ದೇನೆ. ಅದರಲ್ಲೂ ನಗರ ಸಂಚಾರ ಮಾಡುತ್ತೇನೆ’ ಎಂದರು.ಕೆಲವು ರಸ್ತೆಗಳಲ್ಲಿ ಗುಂಡಿ ದುರಸ್ತಿಯನ್ನು ಹಾರೆಯಲ್ಲಿ ಅಗೆದು ಶಿವಕುಮಾರ್ ಪರಿಶೀಲನೆ ಮಾಡಿದರು.</p><p>ಸದಾಶಿವನಗರ, ಜಯಮಹಲ್, ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ, ಟ್ರಿನಿಟಿ ವೃತ್ತ, ದೊಮ್ಮಲೂರು, ಹಳೆ ವಿಮಾನ ರಸ್ತೆ, ರಿಚ್ಮಂಡ್ ರಸ್ತೆ, ಮಾರೇನಹಳ್ಳಿ, ಬನಶಂಕರಿ, ಮೈಸೂರು ಜಂಕ್ಷನ್, ವಿಜಯನಗರ, ಡಾ. ರಾಜಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆಗಳಲ್ಲಿ ಶಿವಕುಮಾರ್ ರಸ್ತೆ ಗುಂಡಿ ದುರಸ್ತಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ' ನಗರದಲ್ಲಿ ಎಲ್ಲೂ ರಸ್ತೆ ಗುಂಡಿಗಳು ಇರಬಾರದು. ಯಾರಿಗೂ ಅಪಾಯ ಆಗಬಾರದು ಎಂಬುದು ನಮ್ಮ ಕಾಳಜಿ' ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ತಿಳಿಸಿದರು.</p><p>ರಸ್ತೆ ಗುಂಡಿಗಳ ದುರಸ್ತಿಯನ್ನು ಪರಿಶೀಲಿಸಲು ಸೋಮವಾರ ತಡರಾತ್ರಿ ನಗರ ಸಂಚಾರ ಆರಂಭಿಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.<br></p><p>‘ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ 400 ಅಧಿಕಾರಿಗಳು, ಎಂಜಿನಿಯರ್ಗಳಿಗೆ ರಸ್ತೆಗಿಳಿದು ಗುಂಡಿ ಮುಚ್ಚಲು ಸೂಚಿಸಿದ್ದೆ. 15 ದಿನ ಗಡುವು ನೀಡಿದ್ದೆ. 14,307 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ವರದಿ ನೀಡಿದ್ದಾರೆ. ಅದನ್ನು ರಸ್ತೆಗಳಲ್ಲಿ ಸಂಚರಿಸಿ ನಾನೇ ಪರಿಶೀಲಿಸುತ್ತಿದ್ದೇನೆ' ಎಂದು ತಿಳಿಸಿದರು.</p><p>‘ನಗರದಲ್ಲಿ ಈ ಹಿಂದೆ ರಸ್ತೆ ಹೇಗಿತ್ತು, ಈಗ ಹೇಗಿವೆ ಎಂಬ ವರದಿ ನೀಡಿದ್ದಾರೆ. ಇದು ಒಂದು ದಾಖಲೆಯ ಕೆಲಸ. ಹೀಗಿದ್ದರೂ ರಸ್ತೆ ಗುಂಡಿ ದುರಸ್ತಿ ಮಾಡುವಲ್ಲಿ ಯಾರಾದರೂ ನಿರ್ಲಕ್ಷ್ಯ ತೋರಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ನಾನು ಮುಖ್ಯ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದರು.<br>‘ಬಿಬಿಎಂಪಿ ಅಧಿಕಾರಿಗಳು ನೀಡಿರುವ ವರದಿಯನ್ನು ನಾನು ಒಪ್ಪುವುದಿಲ್ಲ.ನಾನೇ ಪರಿಶೀಲನೆ ಮಾಡುತ್ತೇನೆ. ಇದು ಮೊದಲ ಹಂತ. ನನ್ನ ಕಾಲೇಜಿನ ಸಮಯದ ಬೈಕ್ ಸಿದ್ಧ ಮಾಡಿಸಿದ್ದೇನೆ. ಅದರಲ್ಲೂ ನಗರ ಸಂಚಾರ ಮಾಡುತ್ತೇನೆ’ ಎಂದರು.ಕೆಲವು ರಸ್ತೆಗಳಲ್ಲಿ ಗುಂಡಿ ದುರಸ್ತಿಯನ್ನು ಹಾರೆಯಲ್ಲಿ ಅಗೆದು ಶಿವಕುಮಾರ್ ಪರಿಶೀಲನೆ ಮಾಡಿದರು.</p><p>ಸದಾಶಿವನಗರ, ಜಯಮಹಲ್, ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ, ಟ್ರಿನಿಟಿ ವೃತ್ತ, ದೊಮ್ಮಲೂರು, ಹಳೆ ವಿಮಾನ ರಸ್ತೆ, ರಿಚ್ಮಂಡ್ ರಸ್ತೆ, ಮಾರೇನಹಳ್ಳಿ, ಬನಶಂಕರಿ, ಮೈಸೂರು ಜಂಕ್ಷನ್, ವಿಜಯನಗರ, ಡಾ. ರಾಜಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆಗಳಲ್ಲಿ ಶಿವಕುಮಾರ್ ರಸ್ತೆ ಗುಂಡಿ ದುರಸ್ತಿ ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>