ದಾಬಸ್ ಪೇಟೆ: ತ್ಯಾಮಗೊಂಡ್ಲು ಪೊಲೀಸ್ ಠಾಣೆ ವತಿಯಿಂದ ಇದೇ 26ರಂದುತಿಪ್ಪಶೆಟ್ಟಿಹಳ್ಳಿಯ ರುದ್ರಮ್ಮ ಹನುಮಯ್ಯ ಕಲ್ಯಾಣ ಮಂಟಪದಲ್ಲಿ ವಾಹನ ವಿಮೆ ಹಾಗೂ ಹೆಲ್ಮೆಟ್ ಮೇಳ ಹಮ್ಮಿಕೊಳ್ಳಲಾಗಿದೆ.
ಚಾಲನಾ ಪರವಾನಗಿ (ಎಲ್.ಎಲ್) ಮಾಡಿಸಿಕೊಳ್ಳುವವರ ದಾಖಲೆಗಳ ಪರಿಶೀಲನೆ ಕೂಡ ನಡೆಯಲಿದೆ. ಅರ್ಜಿಯ ಜೊತೆಗೆಚುನಾವಣಾ ಗುರುತಿನ ಚೀಟಿ ಅಥವಾ ಪಾನ್ ಕಾರ್ಡ್, ಶೈಕ್ಷಣಿಕ ದಾಖಲೆ ಹಾಗೂ ಎರಡು ಭಾವಚಿತ್ರಗಳನ್ನು ತರಬೇಕು ಎಂದು ತ್ಯಾಮಗೊಂಡ್ಲು ಠಾಣೆ ಪಿಎಸ್ಐ ಕೃಷ್ಣಕುಮಾರ್ ತಿಳಿಸಿದ್ದಾರೆ.