ಬೆಂಗಳೂರು: ನಗರದ ಕೆಂಗೇರಿ, ಯಲಹಂಕ ಸೇರಿದಂತೆ ವಿವಿಧೆಡೆ ಶುಕ್ರ ವಾರ ಸಂಜೆ ಸಾಧಾರಣ ಮಳೆಯಾಗಿದೆ.
ಕೆಂಗೇರಿಯ ಕೊಮ್ಮಘಟ್ಟ ವ್ಯಾಪ್ತಿ ಯಲ್ಲಿ ಹಾಗೂ ಯಲಹಂಕ ಸಮೀಪದ ಹುಣಸಮಾರನಹಳ್ಳಿ ಸುತ್ತ ಸಾಧಾರಣ ಮಳೆಯಾಗಿದೆ.
ದಾಬಸ್ ಪೇಟೆ ವರದಿ: ಸೋಂಪುರ ಹೋಬಳಿಯಾದ್ಯಂತ ಶುಕ್ರವಾರ ಸಂಜೆ ಸಾಧಾರಣ ಮಳೆಯಾಗಿದೆ. ಸಂಜೆ 4.20ಕ್ಕೆ ಆರಂಭವಾದ ಮಳೆ 5 ಗಂಟೆವರೆಗೆ ಬಂದಿದೆ. ಮಳೆಗಿಂತ ಗಾಳಿ ಹೆಚ್ಚಾಗಿತ್ತು.
ಐದು ತಿಂಗಳಿನಿಂದ ಮಳೆ ಬಂದಿರ ಲಿಲ್ಲ. ಜನರು ಬಿಸಿಲ ಬೇಗೆಗೆ ಬಸವಳಿದಿ ದ್ದರು. ಗಿಡ–ಮರ ಬಾಡುತ್ತಿದ್ದವು. ಕೆರೆಗಳು ನೀರಿಲ್ಲದೆ ಬತ್ತಿದ್ದವು. ಈಗ ಬಂದಿರುವ ಮಳೆ ತುಸು ಸಮಾಧಾನ ತರಿಸಿದೆ ಎಂದು ರೈತ ರಾಜಣ್ಣ ತಿಳಿಸಿದರು.