ಈ ಲೇಖನದಲ್ಲಿ ಕೆಲ ಜಾತಿ ಸೂಚಕ ಆಕ್ಷೇಪಾರ್ಹ ಪದಬಳಕೆ, ಮಾಹಿತಿ ದೋಷ ಇದ್ದವು. ಸಮಾಜದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗಬಾರದು ಎನ್ನುವ ಕಾರಣಕ್ಕೆ ಪಠ್ಯದಿಂದ ತೆಗೆಯಲಾಗಿದೆ. ಕನ್ನಡ ಸ್ನಾತಕ ಅಧ್ಯಯನ ಮಂಡಳಿಯ ಸಭೆಯ ತೀರ್ಮಾನ, ಕುಲಪತಿ, ಕುಲಸಚಿವರ ಅನುಮೋದನೆ, ಸಿಂಡಿಕೇಟ್ ಸಭೆಯ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗಿದೆ. ಸಮಾಜದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ಪಠ್ಯ ರೂಪಿಸಲು ಅಧ್ಯಯನ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ಹೇಳಿದೆ.