ದಸರಾ ಆಚರಣೆಗೆ ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿರುವ ಪರಿಣಾಮ ಕೆ.ಆರ್.ಮಾರುಕಟ್ಟೆ ಗ್ರಾಹಕರಿಂದ ತುಂಬಿತ್ತು. ಹಬ್ಬಕ್ಕೆ ಎಂದಿನಂತೆ ಈ ಬಾರಿಯೂ ಹೂವು, ಹಣ್ಣಿನ ದರಗಳು ಏರಿದ್ದರೂ ಜನ ಖರೀದಿಗೆ ಮುಗಿಬಿದ್ದರು. ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಕಲಾಸಿಪಾಳ್ಯ, ಗಾಂಧಿಬಜಾರ್, ಮಡಿವಾಳ, ಜಯನಗರ ಹಾಗೂ ಬಸವನಗುಡಿಯ ಕಿರು ಮಾರುಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.