ಸ್ನೇಹಿತನ ಮದುವೆಗೆ ಬಂದಿದ್ದ ವ್ಯಕ್ತಿ ಸಾವು
ಉಡುಪಿ: ಸ್ನೇಹಿತನ ಮದುವೆಗೆ ಬೆಂಗಳೂರಿನಿಂದ ಬಂದಿದ್ದ ಸಾಮ್ರಾಟ್ ಮಂಜುಂದಾರ್ ಎಂಬಾತ ಮಲ್ಪೆ ಬೀಚ್ನಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಜಾಲಹಳ್ಳಿಯ ನಿವಾಸಿ ಸಾಮ್ರಾಟ್ ಮಜುಂದಾರ್ ಸೋಮವಾರ ರಾತ್ರಿ ಸ್ನೇಹಿತರೊಂದಿಗೆ ಬಂದು ಮಲ್ಪೆಯಬ್ಲೂ ವೇವ್ಸ್ ಹೋಟೆಲ್ನಲ್ಲಿ ತಂಗಿದ್ದರು. ಮಂಗಳವಾರ ಬೆಳಿಗ್ಗೆ ಸ್ನೇಹಿತರೊಂದಿಗೆ ಈಜಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ
ದ್ದಾರೆ. ಸಾಮ್ರಾಟ್ ಜತೆ ಸ್ನೇಹಿತ ಬಿನು ಮೋಹನ್ ನೀರಿನಲ್ಲಿ ಕೂಡ ಮುಳು
ಗಿದ್ದಾರೆ. ಮಲ್ಪೆಯ ಲೈಫ್ಗಾರ್ಡ್ ಚಂದ್ರು ಕೂಡಲೇ ನೆರವಿಗೆ ಧಾವಿಸಿ ಬಿನು ಮೋಹನ್ ಅವರನ್ನು ಪ್ರಾಣಾಪಾ
ಯದಿಂದ ಪಾರು ಮಾಡಿದ್ದಾರೆ. ಆದರೆ ಸಾಮ್ರಾಟ್ ನೀರಿನಲ್ಲಿ ಮುಳುಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಸಾಮ್ರಾಟ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.