<p><strong>ಬೆಂಗಳೂರು: </strong>ಸ್ವಾಧೀನಾನುಭವ ಪತ್ರ (ಒಸಿ) ಸಲ್ಲಿಸದ ಮನೆಗಳ ನಿವಾಸಿಗಳಿಗೆ ಜಲಮಂಡಳಿಯು ಲಕ್ಷಾಂತರ ರೂಪಾಯಿ ದಂಡ ವಿಧಿಸುತ್ತಿದೆ. ಒ.ಸಿ ಸಲ್ಲಿಸದೆ ಬಿಲ್ಡರ್ಗಳು ನಿರ್ಲಕ್ಷ್ಯ ಮಾಡಿದ್ದರೆ, ಈ ದಂಡ ವಿಧಿಸುವಲ್ಲಿ ಜಲಮಂಡಳಿಯ ಅಧಿಕಾರಿಗಳೂ ತಾರತಮ್ಯ ಮಾಡುತ್ತಿರುವುದು ಸಮಸ್ಯೆ ಯಾಗಿದೆ ಎಂದು ಖರೀದಿದಾರರು ದೂರುತ್ತಾರೆ.</p>.<p>‘ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರು ಮತ್ತು ಒಳಚರಂಡಿ ಸಂಪರ್ಕ ಮಂಜೂರು ಮಾಡಲು ಸ್ವಾಧೀನಾ<br />ನುಭವ ಪತ್ರದ (ಒಸಿ) ಅವಶ್ಯಕತೆ ಇದೆ. ಆದರೆ, ಸ್ವಾಧೀನಾನುಭವ ತಿದ್ದುಪಡಿ ಕಾಯ್ದೆಯ 5.4 ನಿಯಮದ ಅನ್ವಯ, 2016ರ ಫೆ.25ಕ್ಕಿಂತ ಮೊದಲು ನಿರ್ಮಿಸಿರುವ ಕಟ್ಟಡಗಳಿಗೆ ಒ.ಸಿ ಅವಶ್ಯಕತೆ ಇಲ್ಲ ಎಂದಿದೆ. 2017ರ ಡಿಸೆಂಬರ್ 12ರಂದು ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಆದರೂ, ಜಲಮಂಡಳಿಯ ಅಧಿಕಾರಿ<br />ಗಳು ದಂಡ ವಿಧಿಸುತ್ತಿದ್ದಾರೆ’ ಎಂದು ಮಲ್ಲತ್ತಹಳ್ಳಿಯ ಅಪಾರ್ಟ್ಮೆಂಟ್ ಸಮುಚ್ಚಯವೊಂದರ ನಿವಾಸಿ ಉದಯ್ ಶೆಟ್ಟಿ ದೂರಿದರು.</p>.<p>‘ಅಪಾರ್ಟ್ಮೆಂಟ್ನ ಎಲ್ಲ ಮನೆಗಳಿಗೆ ಸೇರಿ 76 ಲಕ್ಷ ಶುಲ್ಕ ಬಂದಿದೆ. ಒಂದೊಂದು ಮನೆಯವರು ₹25 ಸಾವಿರ ಶುಲ್ಕ ಕಟ್ಟಬೇಕಾಗಿದೆ. ಐದು ವರ್ಷಗಳ ಹಿಂದೆ ಬಿಲ್ಡರ್ ಈ ಅಪಾರ್ಟ್ಮೆಂಟ್ ಕಟ್ಟಿದ್ದಾರೆ. ಮೂರು ವರ್ಷಗಳಿಂದ ನಾವು ವಾಸವಾಗಿದ್ದೇವೆ. ಅಲ್ಲಿಂದ ತಿಂಗಳಿಗೆ ₹20 ಸಾವಿರ, ₹25 ಸಾವಿರ ಸೇರಿ 7 ಲಕ್ಷ ಆಗಿದೆ. ಈ ನಿಯಮದ ಬಗ್ಗೆ ಗಮನ ಸೆಳೆದಾಗ ಕೆಲವು ಅಧಿಕಾರಿಗಳು ದಂಡ ವಿಧಿಸಿರಲಿಲ್ಲ. ಆದರೆ, ಕೆಲವು ಅಧಿಕಾರಿಗಳು ದಂಡ ವಿಧಿಸುತ್ತಾರೆ’ ಎಂದು ಅವರು ದೂರಿದರು.</p>.<p>‘ಸೇಲ್ ಡೀಡ್ ಅಥವಾ ಮಾರಾಟ ಒಪ್ಪಂದದ ಆಧಾರದ ಮೇಲೆಯೇ ಮನೆಯನ್ನು ಖರೀದಿಸಿರುತ್ತೇವೆ. ಕೆಲವು ಸಂದರ್ಭದಲ್ಲಿ ನಿರ್ಮಾಣ ಹಂತ ದಲ್ಲಿರುವಾಗಲೇ ಖರೀದಿ ಮಾಡಲಾಗಿರುತ್ತದೆ. ಕಟ್ಟಡ ಸಂಪೂರ್ಣಗೊಂಡ ನಂತರವೇ ಸ್ವಾಧೀನಾನುಭವ ಪತ್ರ ಕೊಡುತ್ತಾರೆ. ಅಲ್ಲದೆ, ಈ ಪತ್ರ ಒದಗಿಸಲು 30 ದಿನಗಳವರೆಗೆ ಕಾಲಾವಕಾಶವೂ ಇರುತ್ತದೆ. ಈ ಸಂದರ್ಭದಲ್ಲಿ ಬಿಲ್ಡರ್ಗಳು ಮನೆ ಮಾರಾಟ ಮಾಡಿ, ಮುಂದೆ ನೋಡಿದರಾಯಿತು ಎಂದುಕೊಳ್ಳು ತ್ತಾರೆ. ಇದರಿಂದಲೂ ಖರೀದಿದಾರರಿಗೆ ಸಮಸ್ಯೆಯಾಗುತ್ತಿದೆ. ನಗರದಲ್ಲಿ ಸಾವಿರಾರು ಜನ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.</p>.<p>‘2016ಕ್ಕಿಂತ ಮೊದಲಿನ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ ಎಂದರೂ ದಂಡ ಹಾಕಲಾಗುತ್ತಿದೆ. ನಮ್ಮದು ಹೊಸ ಸಂಪರ್ಕ ಎಂದು ಪರಿಗಣಿಸಬೇಕು. ದಂಡದ ಬದಲು ಹೊಸ ಸಂಪರ್ಕ ಪಡೆಯಲು ನೀಡಬೇಕಾದ ಶುಲ್ಕ ಬೇಕಾದರೂ ಪಾವತಿಸುತ್ತೇವೆ’ ಎಂದರು.</p>.<p>‘ಕಟ್ಟಡ ನಿರ್ಮಾಣದಲ್ಲಿ ಎಷ್ಟು ಪ್ರಮಾಣದ ಉಲ್ಲಂಘನೆ ಇರುತ್ತದೆಯೋ, ಅಷ್ಟೇ ಪ್ರಮಾಣದ ದಂಡವನ್ನು ವಿಧಿಸಬೇಕು. ಆದರೆ, ದಂಡ ನಿಗದಿ ವೇಳೆಯೂ ಯಾವುದೇ<br />ನಿಯಮ ಪಾಲನೆಯಾಗುತ್ತಿಲ್ಲ. ಅಲ್ಲದೆ, ಕೆಲವರಿಗೆ ದಂಡ ವಿಧಿಸುತ್ತಾರೆ. ಕೆಲವರಿಗೆ ಇಲ್ಲ. ಇಂತಹ ತಾರತಮ್ಯ ನಿಲ್ಲಬೇಕು’ ಎಂದು ಅವರು ಒತ್ತಾಯಿಸಿದರು.</p>.<p><strong>‘ನಿಯಮದ ಪ್ರಕಾರವೇ ದಂಡ’</strong></p>.<p>‘2016ರ ಫೆ.25ರೊಳಗೆ ಕಟ್ಟಡ ನಿರ್ಮಾಣವಾಗಿದ್ದರೂ, ಜಲಮಂಡಳಿ ಸಂಪರ್ಕವನ್ನು ಅದರ ನಂತರ ಪಡೆದಿರುತ್ತಾರೆ. ಈ ಅವಧಿಯಲ್ಲಿ ಸ್ವಾಧೀನಾನುಭವ ಪತ್ರ ನೀಡದೇ ಇದ್ದರೆ ನಿಯಮದಂತೆಯೇ ದಂಡ ವಿಧಿಸಲಾಗುತ್ತದೆ. ಇದು ಬಿಲ್ಡರ್ಗಳು ಮತ್ತು ಖರೀದಿದಾರರ ನಡುವಿನ ಸಮಸ್ಯೆ. ಜಲಮಂಡಳಿಯ ಪಾತ್ರ ಇದರಲ್ಲಿ ಏನೂ ಇಲ್ಲ’ ಎಂದು ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಬಿಲ್ಡರ್ಗಳ ತಪ್ಪಿನಿಂದ ಖರೀದಿದಾರರಿಗೆ ತೊಂದರೆಯಾಗುವಂತಿದ್ದರೆ ನಿಯಮದಲ್ಲಿಯೇ ಬದಲಾವಣೆ ತರಬೇಕು. ಬಿಬಿಎಂಪಿಯು ಈ ತಿದ್ದುಪಡಿ ತರಬೇಕು’ ಎಂದು ಅವರು ಹೇಳಿದರು.</p>.<p>‘ಮನೆ ಖರೀದಿಸುವಾಗ ಗ್ರಾಹಕರು ಇದನ್ನೆಲ್ಲ ಗಮನಿಸಬೇಕು. ಕಟ್ಟಡ ನಿರ್ಮಾಣದ ಎಲ್ಲ ನಿಯಮಗಳನ್ನು ಬಿಲ್ಡರ್ಗಳು ಪಾಲಿಸಿದ್ದಾರೆಯೇ ಎಂದು ಪರಿಶೀಲಿಸಬೇಕು. ನಂತರವೇ ಮನೆ ಖರೀದಿಸಬೇಕು’ ಎಂದೂ ಅವರು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸ್ವಾಧೀನಾನುಭವ ಪತ್ರ (ಒಸಿ) ಸಲ್ಲಿಸದ ಮನೆಗಳ ನಿವಾಸಿಗಳಿಗೆ ಜಲಮಂಡಳಿಯು ಲಕ್ಷಾಂತರ ರೂಪಾಯಿ ದಂಡ ವಿಧಿಸುತ್ತಿದೆ. ಒ.ಸಿ ಸಲ್ಲಿಸದೆ ಬಿಲ್ಡರ್ಗಳು ನಿರ್ಲಕ್ಷ್ಯ ಮಾಡಿದ್ದರೆ, ಈ ದಂಡ ವಿಧಿಸುವಲ್ಲಿ ಜಲಮಂಡಳಿಯ ಅಧಿಕಾರಿಗಳೂ ತಾರತಮ್ಯ ಮಾಡುತ್ತಿರುವುದು ಸಮಸ್ಯೆ ಯಾಗಿದೆ ಎಂದು ಖರೀದಿದಾರರು ದೂರುತ್ತಾರೆ.</p>.<p>‘ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರು ಮತ್ತು ಒಳಚರಂಡಿ ಸಂಪರ್ಕ ಮಂಜೂರು ಮಾಡಲು ಸ್ವಾಧೀನಾ<br />ನುಭವ ಪತ್ರದ (ಒಸಿ) ಅವಶ್ಯಕತೆ ಇದೆ. ಆದರೆ, ಸ್ವಾಧೀನಾನುಭವ ತಿದ್ದುಪಡಿ ಕಾಯ್ದೆಯ 5.4 ನಿಯಮದ ಅನ್ವಯ, 2016ರ ಫೆ.25ಕ್ಕಿಂತ ಮೊದಲು ನಿರ್ಮಿಸಿರುವ ಕಟ್ಟಡಗಳಿಗೆ ಒ.ಸಿ ಅವಶ್ಯಕತೆ ಇಲ್ಲ ಎಂದಿದೆ. 2017ರ ಡಿಸೆಂಬರ್ 12ರಂದು ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಆದರೂ, ಜಲಮಂಡಳಿಯ ಅಧಿಕಾರಿ<br />ಗಳು ದಂಡ ವಿಧಿಸುತ್ತಿದ್ದಾರೆ’ ಎಂದು ಮಲ್ಲತ್ತಹಳ್ಳಿಯ ಅಪಾರ್ಟ್ಮೆಂಟ್ ಸಮುಚ್ಚಯವೊಂದರ ನಿವಾಸಿ ಉದಯ್ ಶೆಟ್ಟಿ ದೂರಿದರು.</p>.<p>‘ಅಪಾರ್ಟ್ಮೆಂಟ್ನ ಎಲ್ಲ ಮನೆಗಳಿಗೆ ಸೇರಿ 76 ಲಕ್ಷ ಶುಲ್ಕ ಬಂದಿದೆ. ಒಂದೊಂದು ಮನೆಯವರು ₹25 ಸಾವಿರ ಶುಲ್ಕ ಕಟ್ಟಬೇಕಾಗಿದೆ. ಐದು ವರ್ಷಗಳ ಹಿಂದೆ ಬಿಲ್ಡರ್ ಈ ಅಪಾರ್ಟ್ಮೆಂಟ್ ಕಟ್ಟಿದ್ದಾರೆ. ಮೂರು ವರ್ಷಗಳಿಂದ ನಾವು ವಾಸವಾಗಿದ್ದೇವೆ. ಅಲ್ಲಿಂದ ತಿಂಗಳಿಗೆ ₹20 ಸಾವಿರ, ₹25 ಸಾವಿರ ಸೇರಿ 7 ಲಕ್ಷ ಆಗಿದೆ. ಈ ನಿಯಮದ ಬಗ್ಗೆ ಗಮನ ಸೆಳೆದಾಗ ಕೆಲವು ಅಧಿಕಾರಿಗಳು ದಂಡ ವಿಧಿಸಿರಲಿಲ್ಲ. ಆದರೆ, ಕೆಲವು ಅಧಿಕಾರಿಗಳು ದಂಡ ವಿಧಿಸುತ್ತಾರೆ’ ಎಂದು ಅವರು ದೂರಿದರು.</p>.<p>‘ಸೇಲ್ ಡೀಡ್ ಅಥವಾ ಮಾರಾಟ ಒಪ್ಪಂದದ ಆಧಾರದ ಮೇಲೆಯೇ ಮನೆಯನ್ನು ಖರೀದಿಸಿರುತ್ತೇವೆ. ಕೆಲವು ಸಂದರ್ಭದಲ್ಲಿ ನಿರ್ಮಾಣ ಹಂತ ದಲ್ಲಿರುವಾಗಲೇ ಖರೀದಿ ಮಾಡಲಾಗಿರುತ್ತದೆ. ಕಟ್ಟಡ ಸಂಪೂರ್ಣಗೊಂಡ ನಂತರವೇ ಸ್ವಾಧೀನಾನುಭವ ಪತ್ರ ಕೊಡುತ್ತಾರೆ. ಅಲ್ಲದೆ, ಈ ಪತ್ರ ಒದಗಿಸಲು 30 ದಿನಗಳವರೆಗೆ ಕಾಲಾವಕಾಶವೂ ಇರುತ್ತದೆ. ಈ ಸಂದರ್ಭದಲ್ಲಿ ಬಿಲ್ಡರ್ಗಳು ಮನೆ ಮಾರಾಟ ಮಾಡಿ, ಮುಂದೆ ನೋಡಿದರಾಯಿತು ಎಂದುಕೊಳ್ಳು ತ್ತಾರೆ. ಇದರಿಂದಲೂ ಖರೀದಿದಾರರಿಗೆ ಸಮಸ್ಯೆಯಾಗುತ್ತಿದೆ. ನಗರದಲ್ಲಿ ಸಾವಿರಾರು ಜನ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.</p>.<p>‘2016ಕ್ಕಿಂತ ಮೊದಲಿನ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ ಎಂದರೂ ದಂಡ ಹಾಕಲಾಗುತ್ತಿದೆ. ನಮ್ಮದು ಹೊಸ ಸಂಪರ್ಕ ಎಂದು ಪರಿಗಣಿಸಬೇಕು. ದಂಡದ ಬದಲು ಹೊಸ ಸಂಪರ್ಕ ಪಡೆಯಲು ನೀಡಬೇಕಾದ ಶುಲ್ಕ ಬೇಕಾದರೂ ಪಾವತಿಸುತ್ತೇವೆ’ ಎಂದರು.</p>.<p>‘ಕಟ್ಟಡ ನಿರ್ಮಾಣದಲ್ಲಿ ಎಷ್ಟು ಪ್ರಮಾಣದ ಉಲ್ಲಂಘನೆ ಇರುತ್ತದೆಯೋ, ಅಷ್ಟೇ ಪ್ರಮಾಣದ ದಂಡವನ್ನು ವಿಧಿಸಬೇಕು. ಆದರೆ, ದಂಡ ನಿಗದಿ ವೇಳೆಯೂ ಯಾವುದೇ<br />ನಿಯಮ ಪಾಲನೆಯಾಗುತ್ತಿಲ್ಲ. ಅಲ್ಲದೆ, ಕೆಲವರಿಗೆ ದಂಡ ವಿಧಿಸುತ್ತಾರೆ. ಕೆಲವರಿಗೆ ಇಲ್ಲ. ಇಂತಹ ತಾರತಮ್ಯ ನಿಲ್ಲಬೇಕು’ ಎಂದು ಅವರು ಒತ್ತಾಯಿಸಿದರು.</p>.<p><strong>‘ನಿಯಮದ ಪ್ರಕಾರವೇ ದಂಡ’</strong></p>.<p>‘2016ರ ಫೆ.25ರೊಳಗೆ ಕಟ್ಟಡ ನಿರ್ಮಾಣವಾಗಿದ್ದರೂ, ಜಲಮಂಡಳಿ ಸಂಪರ್ಕವನ್ನು ಅದರ ನಂತರ ಪಡೆದಿರುತ್ತಾರೆ. ಈ ಅವಧಿಯಲ್ಲಿ ಸ್ವಾಧೀನಾನುಭವ ಪತ್ರ ನೀಡದೇ ಇದ್ದರೆ ನಿಯಮದಂತೆಯೇ ದಂಡ ವಿಧಿಸಲಾಗುತ್ತದೆ. ಇದು ಬಿಲ್ಡರ್ಗಳು ಮತ್ತು ಖರೀದಿದಾರರ ನಡುವಿನ ಸಮಸ್ಯೆ. ಜಲಮಂಡಳಿಯ ಪಾತ್ರ ಇದರಲ್ಲಿ ಏನೂ ಇಲ್ಲ’ ಎಂದು ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಬಿಲ್ಡರ್ಗಳ ತಪ್ಪಿನಿಂದ ಖರೀದಿದಾರರಿಗೆ ತೊಂದರೆಯಾಗುವಂತಿದ್ದರೆ ನಿಯಮದಲ್ಲಿಯೇ ಬದಲಾವಣೆ ತರಬೇಕು. ಬಿಬಿಎಂಪಿಯು ಈ ತಿದ್ದುಪಡಿ ತರಬೇಕು’ ಎಂದು ಅವರು ಹೇಳಿದರು.</p>.<p>‘ಮನೆ ಖರೀದಿಸುವಾಗ ಗ್ರಾಹಕರು ಇದನ್ನೆಲ್ಲ ಗಮನಿಸಬೇಕು. ಕಟ್ಟಡ ನಿರ್ಮಾಣದ ಎಲ್ಲ ನಿಯಮಗಳನ್ನು ಬಿಲ್ಡರ್ಗಳು ಪಾಲಿಸಿದ್ದಾರೆಯೇ ಎಂದು ಪರಿಶೀಲಿಸಬೇಕು. ನಂತರವೇ ಮನೆ ಖರೀದಿಸಬೇಕು’ ಎಂದೂ ಅವರು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>