ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಕ್ರಿಯ ಆಸ್ಪತ್ರೆಗೆ ಮರುಜೀವ, ಡಿಕೆ ಸುರೇಶ್‌ಗೆ ಥ್ಯಾಂಕ್ಸ್ ಹೇಳಿದ ತೇಜಸ್ವಿ

Last Updated 8 ಮೇ 2021, 10:47 IST
ಅಕ್ಷರ ಗಾತ್ರ

ಬೆಂಗಳೂರು: ವಿಲ್ಸನ್ ಗಾರ್ಡನ್‌ನಲ್ಲಿ ನೆನೆಗುದಿಗೆ ಬಿದ್ದಿದ್ದ ಆಸ್ಪತ್ರೆಯನ್ನು ಪುನಃ ಕಾರ್ಯಾಚರಿಸಲು ಸಂಸದ ತೇಜಸ್ವಿ ಸೂರ್ಯ ಮಾಡಿರುವ ಪ್ರಯತ್ನಕ್ಕೆ ಯಶ ಲಭಿಸಿದೆ. ಈ ಸಂದರ್ಭದಲ್ಲಿ ಇವರಿಗೆ ನೆರವಾಗಿರುವ ಸಂಸದ ಡಿ.ಕೆ. ಸುರೇಶ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಕಳೆದ ಏಳು ವರ್ಷಗಳಿಂದಲೂ ನಿಷ್ಕ್ರಿಯವಾಗಿದ್ದ ಮಹಾಬೋಧಿ ಆಸ್ಪತ್ರೆಯನ್ನು ಸುಸಜ್ಜಿತವಾಗಿ ಪುನರಾರಂಭಿಸಲು ಯಶಸ್ವಿಯಾಗಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಕೋವಿಡ್-19 ಸಾಂಕ್ರಾಮಿಕ ರೋಗದ ಕಠಿಣ ಸಮಯದಲ್ಲಿ ಒಂದಾಗಿ ಕೆಲಸ ನಿರ್ವಹಿಸುವ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಸಂಸದರು ಮಾದರಿಯಾಗಿದ್ದಾರೆ.

ವಿಲ್ಸನ್ ಗಾರ್ಡನ್‌ನಲ್ಲಿರುವ ಮಹಾಬೋಧಿ ಆಸ್ಪತ್ರೆ ಇದೀಗ 50 ಹಾಸಿಗೆಗಳ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ 10 ಐಸಿಯು ಹಾಗೂ 40 ಬೆಡ್‌ಗಳಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಕುರಿತು ವಿಡಿಯೊ ಸಂದೇಶದಲ್ಲಿ ಡಿ.ಕೆ.ಸುರೇಶ್ ಅವರಿಗೆ ಸಂಸದ ತೇಜಸ್ವಿ ಸೂರ್ಯ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಪ್ರತಿ ದಿವಸ ಆಸ್ಪತ್ರೆಗಳ ಬೆಡ್ ಜಾಸ್ತಿ ಮಾಡಬೇಕು. ಐಸಿಯು ಸಂಖ್ಯೆ ಜಾಸ್ತಿಯಾಗಬೇಕು ಅನ್ನೋ ಬೇಡಿಕೆ ಬೆಂಗಳೂರಿನಲ್ಲಿ ಜಾಸ್ತಿಯಾಗ್ತಿದೆ. ಇರುವಂತಹ ಆಸ್ಪತ್ರೆಗಳ ಜೊತೆಗೆ ಇಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಲವಾರು ನಿಷ್ಕ್ರಿಯ ಆಸ್ಪತ್ರೆಗಳಿದ್ದು, ಕಾರ್ಯಾಚರಣೆ ನಡೆಯುತ್ತಿರಲಿಲ್ಲ.

10 ದಿನಗಳ ಹಿಂದೆ ಮಹಾಬೋಧಿ ಆಸ್ಪತ್ರೆಯನ್ನು ಮತ್ತೆ ಶುರು ಮಾಡಬೇಕೆಂಬ ಪ್ರಯತ್ನ ಮಾಡಿದ್ದೇವೆ. ಕಳೆದ 10 ದಿನಗಳಿಂದ ಸತತ ಪ್ರಯತ್ನ ಮಾಡಿ ಬಿಬಿಎಂಪಿಯ ಅಧಿಕಾರಿಗಳು, ಬೇರೆ ಬೇರೆ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು, ಎನ್‌ಜಿಒ ಸೇರಿದಂತೆ ಎಲ್ಲರ ಸಹಕಾರ ತೆಗೆದುಕೊಂಡು ಆಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು ಹಾಕಿ ಶುರು ಮಾಡಿದ್ದೇವೆ.

ಇನ್ನು ಒಂದೆರಡು ದಿನಗಳಲ್ಲಿ ಆಪರೇಷನ್ ಸಹ ಪ್ರಾರಂಭವಾಗಲಿದೆ. ಐಸಿಯು ಬೆಡ್ ಕೂಡಾ ಆಸ್ಪತ್ರೆಯಲ್ಲಿ ಲಭ್ಯವಿದ್ದು, ತಕ್ಷಣದಲ್ಲಿ 50 ರೋಗಿಗಳಿಗೆ ನೆರವು ಸಿಗಲಿದೆ. ಈ ಒಂದು ಪ್ರಯತ್ನದಲ್ಲಿ ನಮಗೆ ಡಿ.ಕೆ ಸುರೇಶ್ ಅವರು ಸಹ ಸಹಕಾರ ಕೊಟ್ಟಿದ್ದಾರೆ. ಅವರಿಗೂ ಈ ಸಂದರ್ಭದಲ್ಲಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT