ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತರಾಜು ಆಯೋಗದ ವರದಿ ತಿರಸ್ಕರಿಸಿ: ಒಕ್ಕಲಿಗರ ಕ್ರಿಯಾ ಸಮಿತಿ

ಅ.28ಕ್ಕೆ ಪ್ರತಿಭಟನೆ
Published 17 ಅಕ್ಟೋಬರ್ 2023, 15:44 IST
Last Updated 17 ಅಕ್ಟೋಬರ್ 2023, 15:44 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಕಾಂತರಾಜು ಆಯೋಗದ ಅಪೂರ್ಣ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ತಿರಸ್ಕರಿಸಬೇಕು ಎಂದು ಒಕ್ಕಲಿಗರ ಕ್ರಿಯಾ ಸಮಿತಿ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಮುಖಂಡರು ಒತ್ತಾಯಿಸಿದರು.

ಕಾಂತರಾಜು ಆಯೋಗದ ಅಪೂರ್ಣ ಜಾತಿ ಗಣತಿ ವರದಿಯಾಗಿದ್ದು, ಇದರಲ್ಲಿ ಒಕ್ಕಲಿಗರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ತೋರಿಸಲಾಗಿದೆ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಅದಕ್ಕಾಗಿ ನೈಜವಾದ ನಿಖರವಾದ ಜಾತಿಗಣತಿ ನಡೆಸಬೇಕು ಎಂದು ಸಮಿತಿಯ ಅಧ್ಯಕ್ಷ ಕೆ.ಜಿ. ಕುಮಾರ್ ತಿಳಿಸಿದರು.

ವರದಿ ತಿರಸ್ಕರಿಸಬೇಕೆಂದು ‌ಇದೇ 28ರಂದು ಬೆಳಿಗ್ಗೆ 10.30ಕ್ಕೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಒಕ್ಕಲಿಗ ಮುಖಂಡರು, ಮಠಾಧೀಶರು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಯವರು ಸಾವಿರಾರು ಜನರು ಭಾಗವಹಿಸಿ ಒಕ್ಕಲಿಗರ ಶಕ್ತಿ ಪ್ರದರ್ಶಿಸಬೇಕು ಎಂದು ಅವರು ಕೋರಿದರು.

ಕೆ.ಎನ್. ಲಿಂಗೇಗೌಡ, ಗೋವಿಂದೇಗೌಡ ಎ.ಎಸ್, ವೇಣುಗೋಪಾಲ್ ಕೆ., ರಾಣಿ ಪ್ರತಾಪ್, ರೇಣುಕಮ್ಮ, ಯಶೋದ, ರುದ್ರೇಶ್, ಸಂತೋಷ್, ಕಡೆಮನೆ ಚಂದ್ರು, ಕೃಷ್ಣಪ್ರಸಾದ್, ಬೈರೇಗೌಡ, ಕೃಷ್ಣೇಗೌಡ, ರವಿ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT