‘ಜನತಾ ಪಕ್ಷ ತ್ಯಜಿಸಿ ಸಮಾಜವಾದಿ ಜನತಾ ಪಕ್ಷ ಎಂಬ ಹೊಸ ಪಕ್ಷ ಕಟ್ಟಿದ ದೇವೇಗೌಡರು, ನಿರಾಶರಾಗಿ ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್. ಪಟೇಲರ ಕೈಕಾಲು ಹಿಡಿದು ಜನತಾದಳ ಪಕ್ಷಕ್ಕೆ ಸೇರಿದ್ದರು. ಆದರೆ, ಉಂಡಮನೆಯ ಗಳ ಎಣಿಸುವುದು ದೇವೇಗೌಡರ ಜನ್ಮಜಾತ ಗುಣವಾಗಿತ್ತು. ಮುಖ್ಯಮಂತ್ರಿ ಸ್ಥಾನ ಪಡೆಯಲು ಹೆಗಡೆ ಮತ್ತು ಪಟೇಲರ ಮೇಲೆ ಬಾಡಿಗೆ ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದರು. ಅಂದು ಸಿದ್ದರಾಮಯ್ಯ ಮತ್ತು ಆರ್.ಎಲ್. ಜಾಲಪ್ಪ ನಿಮ್ಮ ಜೊತೆ ಗಟ್ಟಿಯಾಗಿ ನಿಲ್ಲದೇ ಇದ್ದರೆ ನೀವು ಮುಖ್ಯಮಂತ್ರಿಯಾಗಲು ಸಾಧ್ಯವೇ ಇರಲಿಲ್ಲ. ಈ ಸತ್ಯ ಒಪ್ಪಿಕೊಳ್ಳುವಾಗ ಮಾತ್ರ ಮರೆವಿನ ಸಮಸ್ಯೆ ಕಾಡುತ್ತದೆಯೇ’ ಎಂದೂ ಪ್ರಶ್ನಿಸಿದ್ದಾರೆ.