ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿದ ಅವರು, '2006ರ ನ. 24 ರಿಂದ 2010ರ ಏಪ್ರಿಲ್ 22ರವರೆಗೆ ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಇರಲಿಲ್ಲ. ಬಿಬಿಎಂಪಿಗೆ 7 ನಗರಸಭೆ ಹಾಗೂ 110 ಹಳ್ಳಿಗಳ ಸೇರ್ಪಡೆ ಸಲುವಾಗಿ ಚುನಾವಣೆ ನಡೆಸಲು ಮೀನಾಮೇಷ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣೆ ನಡೆದಿತ್ತು. 198 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆ ಸಮಸ್ಯೆಗಳಿವೆ. ಈಗ ಮತ್ತೆ 60 ಹಳ್ಳಿಗಳ ಸೆರ್ಪಡೆ ಮಾಡಲು ಸರ್ಕಾರ ಹೊರಟಿದೆ. ಮತ್ತೆ ಚುನಾವಣೆ ಮುಂದೂಡುವ ತಂತ್ರವಿದು ಎಂದು ದೂರಿದರು.