‘ನಿಜಲಿಂಗಪ್ಪ ಅವರ ಜೊತೆಗೆ ಹಿಂದೊಮ್ಮೆ ಊಟ ಮಾಡುತ್ತಿರುವಾಗ ಆಹಾರವನ್ನು ವ್ಯರ್ಥ ಮಾಡಿದೆ. ಅದನ್ನು ಗಮನಿಸಿದ ಅವರು, ಅನ್ನದ ಮಹತ್ವದ ಬಗ್ಗೆ ತಿಳಿಸಿದರು.ಅಂದಿನಿಂದ ನಾನು ಒಂದು ಅಗಳು ಅನ್ನವನ್ನೂ ವ್ಯರ್ಥ ಮಾಡುತ್ತಿಲ್ಲ.ವಿವಿಧ ದೇಶಗಳಲ್ಲಿ ಆಹಾರ ವ್ಯರ್ಥ ತಡೆಗೆ ಏನೆಲ್ಲ ಕ್ರಮಕೈಗೊಂಡಿದ್ದಾರೆ ಎನ್ನುವುದರ ಬಗ್ಗೆಯೂ ಅಧ್ಯಯನವನ್ನು ಮಾಡಿದ್ದು, ಆಹಾರವನ್ನು ವ್ಯರ್ಥ ಮಾಡದಂತೆಸ್ಕೌಟ್ಸ್ ಗೈಡ್ಸ್ ಅವರ ಸಹಕಾರದಿಂದ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.