ತಮ್ಮ ಮನವಿಯಲ್ಲಿ ಗೂಳಿಗೌಡ, ‘ಮಾದಕ ದ್ರವ್ಯ ತಡೆಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ದಳ ರಚಿಸಿ ಮುಕ್ತ ಅಧಿಕಾರ ನೀಡಬೇಕು, ಸಹಾಯವಾಣಿ ಆರಂಭಿಸಬೇಕು, ಮಾಹಿತಿ ನೀಡುವವರ ಹೆಸರು, ವಿಳಾಸ ಗೌಪ್ಯವಾಗಿ ಇಡಬೇಕು, ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡಬೇಕು, ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ಇಂಥ ಜಾಲ ಗಮನಕ್ಕೆ ಬಂದರೆ ಶಾಲೆಗಳ ಮುಖ್ಯಸ್ಥರು, ಇಲ್ಲವೇ ಪೋಷಕರ ಗಮನಕ್ಕೆ ತರುವಂತೆ ಮನವರಿಕೆ ಮಾಡಬೇಕು’ ಎಂದು ಮನವಿ ಮಾಡಿದ್ದರು.