<p><strong>ಬೆಂಗಳೂರು: </strong>ದೊಡ್ಡಬಳ್ಳಾಪುರದ ಬೆಟ್ಟವೊಂದರಲ್ಲಿ ಬೆಳೆದ ಹಸಿ ಗಾಂಜಾ ತಂದು ಆರ್.ಟಿ.ನಗರದ ಮೈದಾನದಲ್ಲಿ ಒಣಗಿಸಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಬುಡೆನ್ಸಾಬ್ (59), ಕೋಲಾರ ಶ್ರೀನಿವಾಸಪುರದ ಚಂದ್ರಪ್ಪ (40) ಹಾಗೂ ಚಿಕ್ಕಬಳ್ಳಾಪುರ ಗಂಜಿಗುಂಟೆಯ ಮಾರಪ್ಪ (56) ಬಂಧಿತರು. ಅವರಿಂದ 5 ಕೆ.ಜಿ ಗಾಂಜಾ ಹಾಗೂ 23 ಕೆ.ಜಿ ಹಸಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ’ ಎಂದು ಆರ್.ಟಿ.ನಗರ ಪೊಲೀಸರು ಹೇಳಿದರು.</p>.<p>‘ಮಾದಕ ವ್ಯಸನಿಯಾಗಿದ್ದ ಸುಲ್ತಾನ್ಪಾಳ್ಯದ ಹನುಮಂತಪ್ಪ ಲೇಔಟ್ನ ಕಾರ್ತಿಕ್ (22) ಎಂಬಾತನ್ನು ಇತ್ತೀಚೆಗೆ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಬುಡೆನ್ಸಾಬ್ನಿಂದ ಗಾಂಜಾ ಖರೀದಿ ಮಾಡುತ್ತಿದ್ದ ಬಗ್ಗೆ ಆತ ಮಾಹಿತಿ ನೀಡಿದ್ದ. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿ 5 ಕೆ.ಜಿ ಗಾಂಜಾ ಸಮೇತ ಬುಡೆನ್ಸಾಬ್ನನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.</p>.<p>‘ಗಾಂಜಾ ಮಾರಾಟದಲ್ಲಿ ಪಾಲುದಾರರಾಗಿದ್ದ ಚಂದ್ರಪ್ಪ ಹಾಗೂ ಮಾರಪ್ಪನ ಮಾಹಿತಿಯನ್ನು ಬುಡೆನ್ಸಾಬ್ ಬಾಯ್ಬಿಟ್ಟಿದ್ದ. ಜೊತೆಗೆ, ಆರ್.ಟಿ.ನಗರದ ಈರುಳ್ಳಿ ಮೈದಾನದಲ್ಲಿ ಹಸಿ ಗಾಂಜಾವನ್ನು ಒಣಗಿಸಲು ಹಾಕಿರುವುದಾಗಿಯೂ ತಿಳಿಸಿದ್ದ. ಮೈದಾನಕ್ಕೆ ಹೋಗಿ ಗಾಂಜಾವನ್ನು ಜಪ್ತಿ ಮಾಡಿ, ಆರೋಪಿಗಳನ್ನೂ ಬಂಧಿಸಲಾಯಿತು’ ಎಂದೂ ಪೊಲೀಸರು ಹೇಳಿದರು.</p>.<p>‘ದೊಡ್ಡಬಳ್ಳಾಪುರ ಬಳಿಯ ಬೆಟ್ಟವೊಂದರಲ್ಲಿ ಆರೋಪಿಗಳು ಗಾಂಜಾ ಬೆಳೆಯುತ್ತಿದ್ದರು. ರಾತ್ರಿ ಸಮಯದಲ್ಲಿ ಗಾಂಜಾ ಕತ್ತರಿಸಿಕೊಂಡು ಬಂದು ಮೈದಾನದಲ್ಲಿ ಹಾಕುತ್ತಿದ್ದರು. ಅದು ಪೂರ್ತಿ ಒಣಗಿದ ನಂತರ ಗ್ರಾಹಕರಿಗೆ ಮಾರುತ್ತಿದ್ದರು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ದೊಡ್ಡಬಳ್ಳಾಪುರದ ಬೆಟ್ಟವೊಂದರಲ್ಲಿ ಬೆಳೆದ ಹಸಿ ಗಾಂಜಾ ತಂದು ಆರ್.ಟಿ.ನಗರದ ಮೈದಾನದಲ್ಲಿ ಒಣಗಿಸಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಬುಡೆನ್ಸಾಬ್ (59), ಕೋಲಾರ ಶ್ರೀನಿವಾಸಪುರದ ಚಂದ್ರಪ್ಪ (40) ಹಾಗೂ ಚಿಕ್ಕಬಳ್ಳಾಪುರ ಗಂಜಿಗುಂಟೆಯ ಮಾರಪ್ಪ (56) ಬಂಧಿತರು. ಅವರಿಂದ 5 ಕೆ.ಜಿ ಗಾಂಜಾ ಹಾಗೂ 23 ಕೆ.ಜಿ ಹಸಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ’ ಎಂದು ಆರ್.ಟಿ.ನಗರ ಪೊಲೀಸರು ಹೇಳಿದರು.</p>.<p>‘ಮಾದಕ ವ್ಯಸನಿಯಾಗಿದ್ದ ಸುಲ್ತಾನ್ಪಾಳ್ಯದ ಹನುಮಂತಪ್ಪ ಲೇಔಟ್ನ ಕಾರ್ತಿಕ್ (22) ಎಂಬಾತನ್ನು ಇತ್ತೀಚೆಗೆ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಬುಡೆನ್ಸಾಬ್ನಿಂದ ಗಾಂಜಾ ಖರೀದಿ ಮಾಡುತ್ತಿದ್ದ ಬಗ್ಗೆ ಆತ ಮಾಹಿತಿ ನೀಡಿದ್ದ. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿ 5 ಕೆ.ಜಿ ಗಾಂಜಾ ಸಮೇತ ಬುಡೆನ್ಸಾಬ್ನನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.</p>.<p>‘ಗಾಂಜಾ ಮಾರಾಟದಲ್ಲಿ ಪಾಲುದಾರರಾಗಿದ್ದ ಚಂದ್ರಪ್ಪ ಹಾಗೂ ಮಾರಪ್ಪನ ಮಾಹಿತಿಯನ್ನು ಬುಡೆನ್ಸಾಬ್ ಬಾಯ್ಬಿಟ್ಟಿದ್ದ. ಜೊತೆಗೆ, ಆರ್.ಟಿ.ನಗರದ ಈರುಳ್ಳಿ ಮೈದಾನದಲ್ಲಿ ಹಸಿ ಗಾಂಜಾವನ್ನು ಒಣಗಿಸಲು ಹಾಕಿರುವುದಾಗಿಯೂ ತಿಳಿಸಿದ್ದ. ಮೈದಾನಕ್ಕೆ ಹೋಗಿ ಗಾಂಜಾವನ್ನು ಜಪ್ತಿ ಮಾಡಿ, ಆರೋಪಿಗಳನ್ನೂ ಬಂಧಿಸಲಾಯಿತು’ ಎಂದೂ ಪೊಲೀಸರು ಹೇಳಿದರು.</p>.<p>‘ದೊಡ್ಡಬಳ್ಳಾಪುರ ಬಳಿಯ ಬೆಟ್ಟವೊಂದರಲ್ಲಿ ಆರೋಪಿಗಳು ಗಾಂಜಾ ಬೆಳೆಯುತ್ತಿದ್ದರು. ರಾತ್ರಿ ಸಮಯದಲ್ಲಿ ಗಾಂಜಾ ಕತ್ತರಿಸಿಕೊಂಡು ಬಂದು ಮೈದಾನದಲ್ಲಿ ಹಾಕುತ್ತಿದ್ದರು. ಅದು ಪೂರ್ತಿ ಒಣಗಿದ ನಂತರ ಗ್ರಾಹಕರಿಗೆ ಮಾರುತ್ತಿದ್ದರು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>