<p><strong>ಬೆಂಗಳೂರು: </strong>ಒಂದು ವಾರದ ಅವಧಿಯಲ್ಲಿ ಬಿಬಿಎಂಪಿಯ 5 ಒಣ ಕಸ ಸಂಗ್ರಹಣಾ ಕೇಂದ್ರಗಳು ಬೆಂಕಿಗೆ ಆಹುತಿಯಾಗಿವೆ. ಎಲ್ಲವೂ ಉದ್ದೇಶಪೂರ್ವಕ ಕೃತ್ಯಗಳು ಎಂದು ಕಸ ಆಯುವವರು ಮತ್ತು ಬಿಬಿಎಂಪಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.</p>.<p>ಬೆಂಗಳೂರಿನಲ್ಲಿ 141 ಒಣ ಕಸ ಸಂಸ್ಕರಣಾ ಘಟಕಗಳಿವೆ. ಎಲ್ಲವನ್ನೂ ಆಯಾ ವಾರ್ಡಿನ ಕಸ ಆಯುವವರ ತಂಡಗಳು ನೋಡಿಕೊಳ್ಳುತ್ತಿವೆ. ಒಂದು ಘಟಕದಲ್ಲಿ 10ರಿಂದ 15 ಜನರು ಕೆಲಸ ಮಾಡುತ್ತಿದ್ದಾರೆ.</p>.<p>ನಗರದಲ್ಲಿ ಸಾಂಪ್ರದಾಯಿಕವಾಗಿ ಕಸ ಆಯುವ ಕೆಲಸ ಮಾಡುತ್ತಿದ್ದವರನ್ನೇ ಬಿಬಿಎಂಪಿ ಅಧಿಕೃತಗೊಳಿಸಿದೆ. ಅವರು ಮನೆ–ಮನೆಯಿಂದ ಒಣ ಕಸ ಸಂಗ್ರಹಿಸಿ ಅವುಗಳನ್ನು ಸಂಸ್ಕರಿಸುವ ಕೆಲಸ ಮಾಡುತ್ತಾರೆ. ಕಸ ಸಾಗಿಸಲು ವಾಹನ ವ್ಯವಸ್ಥೆಯನ್ನು ಕಸ ಆಯುವವರೇ ಮಾಡಿಕೊಂಡಿದ್ದು, ಅದಕ್ಕೆ ನಿಗದಿತ ಬಾಡಿಗೆಯನ್ನೂ ಬಿಬಿಎಂಪಿ ಪಾವತಿಸುತ್ತದೆ.</p>.<p>ಕಸ ಸಂಗ್ರಹಣೆ ಮಾಡಿಕೊಂಡು ಬಂದ ನಂತರ ಅವುಗಳಲ್ಲಿರುವ ಪ್ಲಾಸ್ಟಿಕ್, ಪೇಪರ್, ಕಬ್ಬಿಣದ ಅಂಶಗಳನ್ನು ಬೇರ್ಪಡಿಸಲಾಗುತ್ತಿದೆ. 32 ಬಗೆಯ ಪ್ಲಾಸ್ಟಿಕ್, 9 ರೀತಿಯ ಪೇಪರ್ಗಳನ್ನು ವಿಂಗಡಿಸಲಾಗುತ್ತದೆ. ಅವುಗಳನ್ನು ಗುಜರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣ ಹಂಚಿಕೊಂಡು ಕಸ ಆಯುವವರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.</p>.<p>ಗೊಟ್ಟಿಗೆರೆ, ಜೆ.ಪಿ.ನಗರ, ಬನಶಂಕರಿಯ ಗಣೇಶ ಮಂದಿರ ವಾರ್ಡ್, ಮಾರತಹಳ್ಳಿ ವಾರ್ಡ್ನಲ್ಲಿರುವ ಕಸ ಸಂಗ್ರಹಣಾ ಕೇಂದ್ರಗಳಲ್ಲಿ ಬೆಂಕಿ ಅನಾಹುತಗಳು ಇತ್ತೀಚೆಗೆ ಸಂಭವಿಸಿದೆ. ಕೆಲವೇ ದಿನಗಳ ಅಂತರದಲ್ಲಿ ಈ ರೀತಿಯ ಘಟನೆಗಳು ಸಂಭವಿಸುತ್ತಿರುವುದರ ಹಿಂದೆ ಬೇರೆ ಕಾರಣ ಇರಬಹುದು ಎಂಬುದು ಬಿಬಿಎಂಪಿ ಅಧಿಕಾರಿಗಳ ಅನುಮಾನ.</p>.<p>‘ಕಸ ಆಯುವವರಿಗೆ ಈ ಜವಾಬ್ದಾರಿ ವಹಿಸಿರುವುದು ಕಸದ ನಿರ್ವಹಣೆ ಹೆಸರಿನಲ್ಲಿ ಹಣ ಮಾಡಿಕೊಳ್ಳುತ್ತಿದ್ದವರಿಗೆ ತೊಂದರೆಯಾಗಿದೆ. ಹೀಗಾಗಿ, ನಮ್ಮನ್ನು ಬೆದರಿಸಿ ಈ ರೀತಿ ಕೃತ್ಯಗಳನ್ನು ಮಾಡುತ್ತಿರಬಹುದು’ ಎಂದು ಕಸ ಆಯುವವರು ಹೇಳುತ್ತಾರೆ.</p>.<p>ಕುಮಾರಸ್ವಾಮಿ ಲೇಔಟ್ ವಾರ್ಡ್ನಲ್ಲಿಹಸಿರು ದಳದ ನೇತೃತ್ವದಲ್ಲಿ ಕಸ ಆಯುವವರು ನಿರ್ವಹಣೆ ಮಾಡುತ್ತಿದ್ದ ಘಟಕದಲ್ಲಿ ಸೋಮವಾರ ರಾತ್ರಿ ಬೆಂಕಿ ಅನಾಹುತ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು.</p>.<p>‘ಯಾವ ಘಟಕದಲ್ಲೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿಲ್ಲ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಸ ವಿಂಗಡಣೆಯ ಯಂತ್ರ ಹಾಗೂ ಇತರ ಸಲಕರಣೆಗಳು ಸುಟ್ಟು ಹೋಗಿವೆ’ ಎಂದು ಪಾಲಿಕೆ ಅಧಿಕಾರಿಗಳು ಹೇಳಿದರು.</p>.<p>ಬೆಂಕಿ ಅನಾಹುತಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸುತ್ತಮುತ್ತಲ ಮನೆಗಳ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ.</p>.<p class="Briefhead">‘ಉದ್ದೇಶ ಪೂರ್ವಕ ಕೃತ್ಯದ ಅನುಮಾನ’</p>.<p>‘ಕೆಲವೇ ದಿನಗಳ ಅಂತದಲ್ಲಿ ಐದು ಘಟಕಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಕಸ ಆಯುವವರಿಗೆ ವಿರುದ್ಧ ಇರುವವರು ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಇದೆ’ ಎಂದು ಪಾಲಿಕೆ ವಿಶೇಷ ಆಯುಕ್ತ(ಘನತ್ಯಾಜ್ಯ) ಡಿ. ರಂದೀಪ್ ತಿಳಿಸಿದರು.</p>.<p>‘ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಸಂಗ್ರಹಿಸಿದ್ದೇವೆ. ಬೈಕ್ನಲ್ಲಿ ಬಂದು ಬೆಂಕಿ ಹಚ್ಚಿ ವಾಪಸ್ ಹೋದಂತೆ ಕಾಣಿಸುತ್ತಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಒಂದು ವಾರದ ಅವಧಿಯಲ್ಲಿ ಬಿಬಿಎಂಪಿಯ 5 ಒಣ ಕಸ ಸಂಗ್ರಹಣಾ ಕೇಂದ್ರಗಳು ಬೆಂಕಿಗೆ ಆಹುತಿಯಾಗಿವೆ. ಎಲ್ಲವೂ ಉದ್ದೇಶಪೂರ್ವಕ ಕೃತ್ಯಗಳು ಎಂದು ಕಸ ಆಯುವವರು ಮತ್ತು ಬಿಬಿಎಂಪಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.</p>.<p>ಬೆಂಗಳೂರಿನಲ್ಲಿ 141 ಒಣ ಕಸ ಸಂಸ್ಕರಣಾ ಘಟಕಗಳಿವೆ. ಎಲ್ಲವನ್ನೂ ಆಯಾ ವಾರ್ಡಿನ ಕಸ ಆಯುವವರ ತಂಡಗಳು ನೋಡಿಕೊಳ್ಳುತ್ತಿವೆ. ಒಂದು ಘಟಕದಲ್ಲಿ 10ರಿಂದ 15 ಜನರು ಕೆಲಸ ಮಾಡುತ್ತಿದ್ದಾರೆ.</p>.<p>ನಗರದಲ್ಲಿ ಸಾಂಪ್ರದಾಯಿಕವಾಗಿ ಕಸ ಆಯುವ ಕೆಲಸ ಮಾಡುತ್ತಿದ್ದವರನ್ನೇ ಬಿಬಿಎಂಪಿ ಅಧಿಕೃತಗೊಳಿಸಿದೆ. ಅವರು ಮನೆ–ಮನೆಯಿಂದ ಒಣ ಕಸ ಸಂಗ್ರಹಿಸಿ ಅವುಗಳನ್ನು ಸಂಸ್ಕರಿಸುವ ಕೆಲಸ ಮಾಡುತ್ತಾರೆ. ಕಸ ಸಾಗಿಸಲು ವಾಹನ ವ್ಯವಸ್ಥೆಯನ್ನು ಕಸ ಆಯುವವರೇ ಮಾಡಿಕೊಂಡಿದ್ದು, ಅದಕ್ಕೆ ನಿಗದಿತ ಬಾಡಿಗೆಯನ್ನೂ ಬಿಬಿಎಂಪಿ ಪಾವತಿಸುತ್ತದೆ.</p>.<p>ಕಸ ಸಂಗ್ರಹಣೆ ಮಾಡಿಕೊಂಡು ಬಂದ ನಂತರ ಅವುಗಳಲ್ಲಿರುವ ಪ್ಲಾಸ್ಟಿಕ್, ಪೇಪರ್, ಕಬ್ಬಿಣದ ಅಂಶಗಳನ್ನು ಬೇರ್ಪಡಿಸಲಾಗುತ್ತಿದೆ. 32 ಬಗೆಯ ಪ್ಲಾಸ್ಟಿಕ್, 9 ರೀತಿಯ ಪೇಪರ್ಗಳನ್ನು ವಿಂಗಡಿಸಲಾಗುತ್ತದೆ. ಅವುಗಳನ್ನು ಗುಜರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣ ಹಂಚಿಕೊಂಡು ಕಸ ಆಯುವವರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.</p>.<p>ಗೊಟ್ಟಿಗೆರೆ, ಜೆ.ಪಿ.ನಗರ, ಬನಶಂಕರಿಯ ಗಣೇಶ ಮಂದಿರ ವಾರ್ಡ್, ಮಾರತಹಳ್ಳಿ ವಾರ್ಡ್ನಲ್ಲಿರುವ ಕಸ ಸಂಗ್ರಹಣಾ ಕೇಂದ್ರಗಳಲ್ಲಿ ಬೆಂಕಿ ಅನಾಹುತಗಳು ಇತ್ತೀಚೆಗೆ ಸಂಭವಿಸಿದೆ. ಕೆಲವೇ ದಿನಗಳ ಅಂತರದಲ್ಲಿ ಈ ರೀತಿಯ ಘಟನೆಗಳು ಸಂಭವಿಸುತ್ತಿರುವುದರ ಹಿಂದೆ ಬೇರೆ ಕಾರಣ ಇರಬಹುದು ಎಂಬುದು ಬಿಬಿಎಂಪಿ ಅಧಿಕಾರಿಗಳ ಅನುಮಾನ.</p>.<p>‘ಕಸ ಆಯುವವರಿಗೆ ಈ ಜವಾಬ್ದಾರಿ ವಹಿಸಿರುವುದು ಕಸದ ನಿರ್ವಹಣೆ ಹೆಸರಿನಲ್ಲಿ ಹಣ ಮಾಡಿಕೊಳ್ಳುತ್ತಿದ್ದವರಿಗೆ ತೊಂದರೆಯಾಗಿದೆ. ಹೀಗಾಗಿ, ನಮ್ಮನ್ನು ಬೆದರಿಸಿ ಈ ರೀತಿ ಕೃತ್ಯಗಳನ್ನು ಮಾಡುತ್ತಿರಬಹುದು’ ಎಂದು ಕಸ ಆಯುವವರು ಹೇಳುತ್ತಾರೆ.</p>.<p>ಕುಮಾರಸ್ವಾಮಿ ಲೇಔಟ್ ವಾರ್ಡ್ನಲ್ಲಿಹಸಿರು ದಳದ ನೇತೃತ್ವದಲ್ಲಿ ಕಸ ಆಯುವವರು ನಿರ್ವಹಣೆ ಮಾಡುತ್ತಿದ್ದ ಘಟಕದಲ್ಲಿ ಸೋಮವಾರ ರಾತ್ರಿ ಬೆಂಕಿ ಅನಾಹುತ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು.</p>.<p>‘ಯಾವ ಘಟಕದಲ್ಲೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿಲ್ಲ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಸ ವಿಂಗಡಣೆಯ ಯಂತ್ರ ಹಾಗೂ ಇತರ ಸಲಕರಣೆಗಳು ಸುಟ್ಟು ಹೋಗಿವೆ’ ಎಂದು ಪಾಲಿಕೆ ಅಧಿಕಾರಿಗಳು ಹೇಳಿದರು.</p>.<p>ಬೆಂಕಿ ಅನಾಹುತಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸುತ್ತಮುತ್ತಲ ಮನೆಗಳ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ.</p>.<p class="Briefhead">‘ಉದ್ದೇಶ ಪೂರ್ವಕ ಕೃತ್ಯದ ಅನುಮಾನ’</p>.<p>‘ಕೆಲವೇ ದಿನಗಳ ಅಂತದಲ್ಲಿ ಐದು ಘಟಕಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಕಸ ಆಯುವವರಿಗೆ ವಿರುದ್ಧ ಇರುವವರು ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಇದೆ’ ಎಂದು ಪಾಲಿಕೆ ವಿಶೇಷ ಆಯುಕ್ತ(ಘನತ್ಯಾಜ್ಯ) ಡಿ. ರಂದೀಪ್ ತಿಳಿಸಿದರು.</p>.<p>‘ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಸಂಗ್ರಹಿಸಿದ್ದೇವೆ. ಬೈಕ್ನಲ್ಲಿ ಬಂದು ಬೆಂಕಿ ಹಚ್ಚಿ ವಾಪಸ್ ಹೋದಂತೆ ಕಾಣಿಸುತ್ತಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>