ಸೂರ್ಯನ ಹುಟ್ಟು, ಭೂಮಿಯ ಪರಿಭ್ರಮಣೆ, ತಾರಾ ಪುಂಜ, ಹುಣ್ಣಿಮೆ, ಅಮಾವಾಸ್ಯೆ, ಗ್ರಹಣಗಳ ಕುರಿತು ಜನರಲ್ಲಿ ಮೂಢ ನಂಬಿಕೆಗಳೇ ತುಂಬಿದ್ದವು. ಖಗೋಳ ವಿಜ್ಞಾನಿಗಳು ಕಾಲಕಾಲಕ್ಕೆ ವೈಜ್ಞಾನಿಕ ಸತ್ಯಗಳನ್ನು ಅನಾವರಣ ಮಾಡುತ್ತಾ ಬಂದರು. ಇಂದು ಸಾಕಷ್ಟು ಜನರು ವೈಜ್ಞಾನಿಕ ಮನೋಭಾವ ಹೊಂದಿದ್ದಾರೆ. ಆದರೂ ಈ ಆಧುನಿಕ ಕಾಲಘಟ್ಟದಲ್ಲಿ ಮೌಢ್ಯ ನೆಲೆಸಿರುವುದು ವಿಪರ್ಯಾಸ. ಶಿಕ್ಷಣ, ಸೂಕ್ತ ಅರಿವಿನ ಮೂಲಕ ಜನರಲ್ಲಿ ನಂಬಿಕೆ ಮೂಡಿಸಬೇಕಿದೆ ಎಂದು ಕಿವಿಮಾತು ಹೇಳಿದರು.