‘ಎಲೆ ಮಲ್ಲಪ್ಪ ಶೆಟ್ಟಿ ಕೆರೆಯನ್ನು ಪ್ಲಾಸ್ಟಿಕ್ ರಹಿತ, ಕಸರಹಿತ, ಮಿಶ್ರತ್ಯಾಜ್ಯರಹಿತವನ್ನಾಗಿ ಮಾಡಲು ಸ್ವಚ್ಛತಾ ಕಾರ್ಯ ಒಂದು ಹೆಜ್ಜೆಯಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಆದೇಶ, ಸ್ಥಳೀಯರು ಹೋರಾಟ ನಡೆಸುತ್ತಿದ್ದರೂ ಕೆರೆಯಲ್ಲಿ ಕಟ್ಟಡ ತ್ಯಾಜ್ಯವನ್ನು ಇಂದಿಗೂ ಸುರಿಯಲಾಗುತ್ತಿದೆ. ಒಂದು ಕಡೆ ಕೆರೆಗೆ ಕಸ ತುಂಬಲಾಗುತ್ತಿದೆ. ಇನ್ನೊಂದೆಡೆ ಒತ್ತುವರಿಯಿಂದ ಕೆರೆ ನಲುಗುತ್ತಿದೆ. ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಿತ ಸಂಬಂಧ ಪಟ್ಟ ಯಾರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ಸ್ವಯಂ ಸೇವಕರು ದೂರಿದರು.