ಮಾರ್ಚ್ 3ರಂದು ಆನೆ ಹಿಂಡಿನಿಂದ ಬೇರ್ಪಟ್ಟು ರಾಗಿಹಳ್ಳಿ ಸಮೀಪ ಈ ಮರಿಯಾನೆ ಕಾಣಿಸಿಕೊಂಡಿತ್ತು. ಸಂರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರೈಕೆ ಮಾಡಲಾಗುತ್ತಿತ್ತು. ಮರಿಯಾನೆ ಕೆಲ ದಿನಗಳಿಂದ ಅತಿಸಾರ ಬೇಧಿಯಿಂದ ಬಳಲುತ್ತಿತ್ತು. ಗುರುವಾರ ರಾತ್ರಿ ಹೊಟ್ಟನೋವು ಮತ್ತು ಅತಿಸಾರ ಬೇಧಿ ಹೆಚ್ಚಾಗಿತ್ತು. ಬನ್ನೇರುಘಟ್ಟದ ಜೈವಿಕ ಉದ್ಯಾನದ ವೈದ್ಯರು ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.