ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಚಿತ್ರಕಲಾ ಪರಿಷತ್ತಿನಲ್ಲಿ ‘ವನ್ಯಜೀವಿ ಛಾಯಾಚಿತ್ರ’ ಪ್ರದರ್ಶನ

ಎಂ.ಎನ್‌.ಜಯಕುಮಾರ್ ಅವರ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ
Published 28 ಸೆಪ್ಟೆಂಬರ್ 2023, 16:14 IST
Last Updated 28 ಸೆಪ್ಟೆಂಬರ್ 2023, 16:14 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಹೆಮ್ಮೆಯ ‘ಹುಲಿ ಯೋಜನೆ’ಯ ಸುವರ್ಣ ಮಹೋತ್ಸವದ ನೆನಪಿಗಾಗಿ ಹಾಗೂ ಜಾಗತಿಕ ಜೀವವೈವಿಧ್ಯ ಆಚರಣೆ ಹಿನ್ನೆಲೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿರುವ ನಿವೃತ್ತ ಅರಣ್ಯಾಧಿಕಾರಿ ಹಾಗೂ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಎಂ.ಎನ್‌.ಜಯಕುಮಾರ್ ಅವರ ಏಕವ್ಯಕ್ತಿ ‘ವನ್ಯಜೀವಿ ಛಾಯಾಚಿತ್ರ’ ಪ್ರದರ್ಶನ ‘ಎನ್‌ಕೌಂಟರ್ಸ್‌ ಇನ್‌ ದಿ ವೈಲ್ಡ್‌ 2.0‘ಗೆ ಗುರುವಾರ ಚಾಲನೆ ನೀಡಲಾಯಿತು.

ಜಯಕುಮಾರ್ ಅವರು ಭಾರತ, ಆಗ್ನೇಯ ಏಷ್ಯಾ, ಆಫ್ರಿಕಾ ಮತ್ತು ಅಮೆರಿಕದ ಅರಣ್ಯಗಳಲ್ಲಿ ಸೆರೆ ಹಿಡಿದಿರುವ 231 ವೈವಿಧ್ಯಮಯ ವನ್ಯಜೀವಿಗಳ ಛಾಯಾಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.  ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಅಕ್ಟೋಬರ್ 8ರವರೆಗೆ ಛಾಯಾಚಿತ್ರ ಪ್ರದರ್ಶನಗೊಳ್ಳಲಿದೆ.

ಪ್ರತಿ ಛಾಯಾಚಿತ್ರದ ಎದುರು ಇಟ್ಟಿರುವ ಫಲಕದಲ್ಲಿ ಕ್ಯೂಆರ್‌ ಕೋಡ್ ನೀಡಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ, ಫೋಟೊದಲ್ಲಿನ ವನ್ಯಜೀವಿಗಳ ವಿವರ ಇಂಗ್ಲಿಷ್‌ನಲ್ಲಿ‌ ಲಭ್ಯವಾಗುತ್ತದೆ. ವಿವರವನ್ನು ಓದಬಹುದು ಹಾಗೂ ಹೆಡ್‌ಫೋನ್‌ ಬಳಸಿ ಕೇಳಲೂಬಹುದು.

ಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ಪ್ರದರ್ಶನವಿದೆ. ಮೊದಲ ಗ್ಯಾಲರಿಯಲ್ಲಿ ‘ಹುಲಿ ಯೋಜನೆ’ಯ ನೆನಪಿಗಾಗಿ ಹುಲಿಗಳ ಛಾಯಾಚಿತ್ರ ಪ್ರದರ್ಶಿಸಲಾಗಿದೆ. ಎರಡನೇ ಗ್ಯಾಲರಿಯಲ್ಲಿ ಏಷ್ಯಾದ ವನ್ಯಜೀವಿಗಳು, ಮೂರನೇ ಗ್ಯಾಲರಿಯಲ್ಲಿ ಆಫ್ರಿಕಾದ ವನ್ಯಜೀವಿಗಳ ಚಿತ್ರಗಳಿವೆ. ನಾಲ್ಕನೇ ಗ್ಯಾಲರಿಯಲ್ಲಿ ‘ಕಲರ್ಸ್ ಆಫ್ ನೇಚರ್‌’ ಶೀರ್ಷಿಕೆಯಡಿ ವೈವಿಧ್ಯಮಯ ಪಕ್ಷಿಗಳ ಛಾಯಾಚಿತ್ರಗಳ ಪ್ರದರ್ಶನವಿದೆ.

ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7.30ರ ವರೆಗೆ ಪ್ರದರ್ಶನವಿರುತ್ತದೆ. ಜೊತೆಗೆ ನಿತ್ಯ ಸಂಜೆ 5.30 ರಿಂದ 7.30ರ ವರೆಗೆ ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಛಾಯಾಗ್ರಹಣ ಮತ್ತು ಚಿತ್ರ ನಿರ್ಮಾಣ ತಜ್ಞರಿಂದ ವಿಚಾರ ಮಂಡನೆ, ಪ್ರೇಕ್ಷಕರೊಂದಿಗೆ ಸಂವಾದವೂ ಇದೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ.

ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು (ಎಡದಿಂದ ಬಲಕ್ಕೆ) ಕರ್ನಾಟಕ ಬ್ಯಾಂಕ್‌ನ ಮಾಧವ್‌ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ ವಿಭಾಗ) ಸುಭಾಷ್‌ ಮಾಳ್ಖೆಡೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ರಾಜೀವ್‌ ರಂಜನ್‌ ಪಿಗ್ಮಾಲಿಯನ್ ವೆಲ್ತ್ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ವರನ್ ರಮಣನ್ ನಿವೃತ್ತ ಅರಣ್ಯಾಧಿಕಾರಿ ಮತ್ತು ವನ್ಯಜೀವಿ ಛಾಯಾಗ್ರಾಹಕ ಎಂ.ಎನ್‌.ಜಯಕುಮಾರ್ ಕರ್ನಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್‌ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಚಲನಚಿತ್ರ ನಿರ್ಮಾಪಕ ಸುಬ್ಬಯ್ಯ ನಲ್ಲಮುತ್ತು ವೀಕ್ಷಿಸಿದರು.
ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು (ಎಡದಿಂದ ಬಲಕ್ಕೆ) ಕರ್ನಾಟಕ ಬ್ಯಾಂಕ್‌ನ ಮಾಧವ್‌ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ ವಿಭಾಗ) ಸುಭಾಷ್‌ ಮಾಳ್ಖೆಡೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ರಾಜೀವ್‌ ರಂಜನ್‌ ಪಿಗ್ಮಾಲಿಯನ್ ವೆಲ್ತ್ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ವರನ್ ರಮಣನ್ ನಿವೃತ್ತ ಅರಣ್ಯಾಧಿಕಾರಿ ಮತ್ತು ವನ್ಯಜೀವಿ ಛಾಯಾಗ್ರಾಹಕ ಎಂ.ಎನ್‌.ಜಯಕುಮಾರ್ ಕರ್ನಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್‌ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಚಲನಚಿತ್ರ ನಿರ್ಮಾಪಕ ಸುಬ್ಬಯ್ಯ ನಲ್ಲಮುತ್ತು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT