ನೆಲಮಂಗಲ: ರಸ್ತೆ ಬದಿ ಮಲಗಿರುವ ನಿರ್ಗತಿಕರು, ಭಿಕ್ಷುಕರು ಹಾಗೂ ಪೌರ ಕಾರ್ಮಿಕರಿಗೆ ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಹೊದಿಕೆ ವಿತರಿಸಲಾಯಿತು.ಮಂಗಳವಾರ ಬೆಳಗಿನ ಜಾವ ರೋಟರಿ ಸದಸ್ಯರು ಪಟ್ಟಣದಲ್ಲಿ ತಿರುಗಾಡಿ ಹೊದಿಕೆ ವಿತರಿಸಿದರು.
ಕ್ಲಬ್ ಅಧ್ಯಕ್ಷ ಮಂಜುನಾಥ್ ಪಾಟೀಲ್ ಮಾತನಾಡಿ, ‘ಮೈತುಂಬಾ ಬಟ್ಟೆ, ಒಂದು ಹೊತ್ತಿನ ಊಟಕ್ಕೂ ಪರದಾಡುವವರು ನಮ್ಮ ನಡುವೆ ಇದ್ದಾರೆ. ಅವರ ಜೀವನದಲ್ಲಿ ಭರವಸೆ ಮೂಡಿಸಲು ಹೊದಿಕೆಗಳನ್ನು ರೋಟರಿ ವತಿಯಿಂದ ನೀಡುತ್ತಿದ್ದೇವೆ’ ಎಂದರು.
ಖಜಾಂಚಿ ಎಂ.ಟಿ.ನವೀನಕುಮಾರ್, ‘ನಿರ್ಗತಿಕರು ಅರ್ಥಪೂರ್ಣ ಜೀವನ ಸಾಗಿಸಲು ರೋಟರಿಯಿಂದ ಯೋಜನೆ ರೂಪಿಸುತ್ತಿದ್ದು, ಹೊದಿಕೆ ನೀಡುತ್ತಿರುವುದು ಪ್ರಾರಂಭಿಕ ಕಾರ್ಯಕ್ರಮ’ ಎಂದರು.