ಹಣದಾಸೆಗಾಗಿ ಕೃತ್ಯ: ‘ಶೈಕ್ಷಣಿಕ, ಉದ್ಯೋಗ ಸೇರಿದಂತೆ ವಿವಿಧ ಬಗೆಯ ಕೆಲಸಗಳಿಗೆ ಪೊಲೀಸರ ಪರಿಶೀಲನಾ ಪ್ರಮಾಣ ಪತ್ರ ಅಗತ್ಯವಿರುತ್ತದೆ. ಅಂಥ ಪತ್ರ ಪಡೆಯಲು ನಿತ್ಯವೂ ನೂರಾರು ಮಂದಿ ಕಮಿಷನರ್ ಕಚೇರಿಗೆ ಬಂದು ಹೋಗುತ್ತಾರೆ. ಪತ್ರ ವಿತರಿಸಲು ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಅಲ್ಲಿಯೇ ಹೆಡ್ ಕಾನ್ಸ್ಟೆಬಲ್ಗಳಾದಮಂಜುನಾಥ್ ಹಾಗೂ ನಾರಾಯಣಸ್ವಾಮಿ ಕರ್ತವ್ಯ ನಿರ್ವಹಿಸುತ್ತಿದ್ದರು’ ಎಂದು ಹಿರಿಯ ಅಧಿಕಾರಿ ಹೇಳಿದರು.