<p><strong>ಬೆಂಗಳೂರು</strong>: ‘ನನ್ನನ್ನು ಮನೆಯಲ್ಲಿ ಕೂಡಿಹಾಕಿದ್ದ ಮಗಳು ಹಾಗೂ ಅಳಿಯ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ’ ಎಂದು ಆರೋಪಿಸಿ ಬನಶಂಕರಿ ನಿವಾಸಿ ಮುನಿವೆಂಕಟರಾಮ (68) ಎಂಬುವರು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.</p>.<p>‘ಮಗಳು ಗಂಗಾವತಿ ಹಾಗೂ ಅಳಿಯ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡಿಕೊಂಡು ಮುನಿವೆಂಕಟರಾಮ ಜೀವನ ನಡೆಸುತ್ತಿದ್ದರು. ನಂದಿನಿ ಲೇಔಟ್ನಲ್ಲಿ ವಾಸಿರುವ ಮಗಳು ಗಂಗಾವತಿ, ತಂದೆಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದರು. ತುರ್ತು ಕೆಲಸಕ್ಕೆ ಹಣ ಬೇಕೆಂದು ಹೇಳಿದ್ದ ಗಂಗಾವತಿ, ಮುನಿವೆಂಕಟರಾಮ ಬಳಿ ಇದ್ದ 2 ಚಿನ್ನದ ಉಂಗುರ ಹಾಗೂ ಕತ್ತಿನಲ್ಲಿದ್ದ ಚಿನ್ನದ ಸರ ತೆಗೆದುಕೊಂಡು ಮಾರಿದ್ದರು’</p>.<p>‘ಬಿಡಿಎ ನಿವೇಶನ ಪಡೆಯಲು ಯೋಚಿಸಿದ್ದ ಮುನಿವೆಂಕಟರಾಮ, ₹ 4.65 ಲಕ್ಷ ಹೊಂದಿಸಿಟ್ಟಿದ್ದರು. ನಿವೇಶನ ಕೊಡಿಸುವುದಾಗಿ ಆಮಿಷವೊಡ್ಡಿ ಆ ಹಣವನ್ನೂ ಮಗಳು ಹಾಗೂ ಅಳಿಯ ಪಡೆದುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>‘ಹಲವು ದಿನವಾದರೂ ಮಗಳು ಹಾಗೂ ಅಳಿಯ, ನಿವೇಶನ ಖರೀದಿಸಿ ಕೊಟ್ಟಿರಲಿಲ್ಲ. ಸಿಟ್ಟಾದ ಮುನಿವೆಂಕಟರಾಮ, ಹಣ ವಾಪಸು ಕೊಡುವಂತೆ ಒತ್ತಾಯಿಸಿದ್ದರು. ಅಷ್ಟಕ್ಕೆ ಕೋಪಗೊಂಡ ಮಗಳು ಹಾಗೂ ಅಳಿಯ, ಮನೆಯ ಕೊಠಡಿಯಲ್ಲೇ 5 ದಿನ ಕೂಡಿಹಾಕಿದ್ದರು. ಚಿತ್ರಹಿಂಸೆ ಸಹ ನೀಡಿದ್ದರು. ಸ್ಥಳೀಯರ ನೆರವಿನಿಂದ ಮನೆಯಿಂದ ತಪ್ಪಿಸಿಕೊಂಡಿದ್ದ ದೂರುದಾರ, ಠಾಣೆಗೆ ಬಂದು ದೂರು ನೀಡಿದ್ದಾರೆ. ವಿಚಾರಣೆ ಬಳಿಕವೇ ನಿಖರ ಮಾಹಿತಿ ತಿಳಿಯಲಿದೆ’ ಎಂದೂ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ನನ್ನನ್ನು ಮನೆಯಲ್ಲಿ ಕೂಡಿಹಾಕಿದ್ದ ಮಗಳು ಹಾಗೂ ಅಳಿಯ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ’ ಎಂದು ಆರೋಪಿಸಿ ಬನಶಂಕರಿ ನಿವಾಸಿ ಮುನಿವೆಂಕಟರಾಮ (68) ಎಂಬುವರು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.</p>.<p>‘ಮಗಳು ಗಂಗಾವತಿ ಹಾಗೂ ಅಳಿಯ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡಿಕೊಂಡು ಮುನಿವೆಂಕಟರಾಮ ಜೀವನ ನಡೆಸುತ್ತಿದ್ದರು. ನಂದಿನಿ ಲೇಔಟ್ನಲ್ಲಿ ವಾಸಿರುವ ಮಗಳು ಗಂಗಾವತಿ, ತಂದೆಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದರು. ತುರ್ತು ಕೆಲಸಕ್ಕೆ ಹಣ ಬೇಕೆಂದು ಹೇಳಿದ್ದ ಗಂಗಾವತಿ, ಮುನಿವೆಂಕಟರಾಮ ಬಳಿ ಇದ್ದ 2 ಚಿನ್ನದ ಉಂಗುರ ಹಾಗೂ ಕತ್ತಿನಲ್ಲಿದ್ದ ಚಿನ್ನದ ಸರ ತೆಗೆದುಕೊಂಡು ಮಾರಿದ್ದರು’</p>.<p>‘ಬಿಡಿಎ ನಿವೇಶನ ಪಡೆಯಲು ಯೋಚಿಸಿದ್ದ ಮುನಿವೆಂಕಟರಾಮ, ₹ 4.65 ಲಕ್ಷ ಹೊಂದಿಸಿಟ್ಟಿದ್ದರು. ನಿವೇಶನ ಕೊಡಿಸುವುದಾಗಿ ಆಮಿಷವೊಡ್ಡಿ ಆ ಹಣವನ್ನೂ ಮಗಳು ಹಾಗೂ ಅಳಿಯ ಪಡೆದುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>‘ಹಲವು ದಿನವಾದರೂ ಮಗಳು ಹಾಗೂ ಅಳಿಯ, ನಿವೇಶನ ಖರೀದಿಸಿ ಕೊಟ್ಟಿರಲಿಲ್ಲ. ಸಿಟ್ಟಾದ ಮುನಿವೆಂಕಟರಾಮ, ಹಣ ವಾಪಸು ಕೊಡುವಂತೆ ಒತ್ತಾಯಿಸಿದ್ದರು. ಅಷ್ಟಕ್ಕೆ ಕೋಪಗೊಂಡ ಮಗಳು ಹಾಗೂ ಅಳಿಯ, ಮನೆಯ ಕೊಠಡಿಯಲ್ಲೇ 5 ದಿನ ಕೂಡಿಹಾಕಿದ್ದರು. ಚಿತ್ರಹಿಂಸೆ ಸಹ ನೀಡಿದ್ದರು. ಸ್ಥಳೀಯರ ನೆರವಿನಿಂದ ಮನೆಯಿಂದ ತಪ್ಪಿಸಿಕೊಂಡಿದ್ದ ದೂರುದಾರ, ಠಾಣೆಗೆ ಬಂದು ದೂರು ನೀಡಿದ್ದಾರೆ. ವಿಚಾರಣೆ ಬಳಿಕವೇ ನಿಖರ ಮಾಹಿತಿ ತಿಳಿಯಲಿದೆ’ ಎಂದೂ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>