<p><strong>ಬೆಂಗಳೂರು:</strong> ಸ್ವಾತಂತ್ರ್ಯೋತ್ಸವ ದಿನ ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದ ಆರೋಪದಡಿ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲ ಹಾಗೂ ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>‘ಆಗಸ್ಟ್ 15ರಂದು ಮಧ್ಯಾಹ್ನ ಕಾಲೇಜು ಎದುರು 6 ಸಾವಿರದಿಂದ 8 ಸಾವಿರ ಜನ ಸೇರಿದ್ದರು. ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಲಾಗಿತ್ತು. ಅಲ್ಲಿಯ ಜನರು ನೀಡಿದ್ದ ಹೇಳಿಕೆ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಸ್ವಾತಂತ್ರ್ಯೋತ್ಸವ ದಿನದಂದು ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಟಿಕೆಟ್ ಇರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ತಲಾ 20 ಟಿಕೆಟ್ ನೀಡಿದ್ದ ಆಡಳಿತ ಮಂಡಳಿ, ₹ 100 ದರದಲ್ಲಿ ಮಾರುವಂತೆ ತಿಳಿಸಿತ್ತು. ಎಲ್ಲ ವಿದ್ಯಾರ್ಥಿಗಳು ಸೇರಿ 10,000 ಟಿಕೆಟ್ ಮಾರಿದ್ದರು.’</p>.<p>‘ಟಿಕೆಟ್ ಪಡೆದಿದ್ದ ಬಹುತೇಕರು ಆಗಸ್ಟ್ 15ರಂದು ಕಾಲೇಜು ಬಳಿ ಬಂದಿದ್ದರು. ಸಭಾಭವನ ಭರ್ತಿಯಾಗಿದ್ದರಿಂದ, ಕ್ರಮೇಣ ಪ್ರವೇಶ ನಿರ್ಬಂಧಿಸಲಾಗಿತ್ತು. ಗೇಟ್ ಬಂದ್ ಮಾಡಿದ್ದರಿಂದ, 6 ಸಾವಿರದಿಂದ 8 ಸಾವಿರ ಜನ ಹೊರಗೆ ರಸ್ತೆ ಮೇಲೆ ನಿಂತಿದ್ದರು. ಒಳಗೆ ಬಿಡುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಿದ್ದರು. ಸಾರ್ವಜನಿಕರ ವಾಹನ ಓಡಾಟಕ್ಕೂ ಅಡ್ಡಿಪಡಿಸಿದ್ದರು. ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಸ್ಥಿತಿ ನಿಭಾಯಿಸಿದ್ದರು.’</p>.<p>‘ಕಾರ್ಯಕ್ರಮ ನಡೆಸಲು ಕಾಲೇಜಿ ನವರು ಅನುಮತಿ ಪಡೆದಿರಲಿಲ್ಲ. ಅಕ್ರಮವಾಗಿ ತಡೆಯುವುದು (ಐಪಿಸಿ 341), ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ (ಐಪಿಸಿ 283) ಹಾಗೂ ಅಕ್ರಮ ಕೂಟ (ಐಪಿಸಿ 143) ಆರೋಪದಡಿ ಕಾಲೇಜು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸ್ವಾತಂತ್ರ್ಯೋತ್ಸವ ದಿನ ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದ ಆರೋಪದಡಿ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲ ಹಾಗೂ ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>‘ಆಗಸ್ಟ್ 15ರಂದು ಮಧ್ಯಾಹ್ನ ಕಾಲೇಜು ಎದುರು 6 ಸಾವಿರದಿಂದ 8 ಸಾವಿರ ಜನ ಸೇರಿದ್ದರು. ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಲಾಗಿತ್ತು. ಅಲ್ಲಿಯ ಜನರು ನೀಡಿದ್ದ ಹೇಳಿಕೆ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಸ್ವಾತಂತ್ರ್ಯೋತ್ಸವ ದಿನದಂದು ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಟಿಕೆಟ್ ಇರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ತಲಾ 20 ಟಿಕೆಟ್ ನೀಡಿದ್ದ ಆಡಳಿತ ಮಂಡಳಿ, ₹ 100 ದರದಲ್ಲಿ ಮಾರುವಂತೆ ತಿಳಿಸಿತ್ತು. ಎಲ್ಲ ವಿದ್ಯಾರ್ಥಿಗಳು ಸೇರಿ 10,000 ಟಿಕೆಟ್ ಮಾರಿದ್ದರು.’</p>.<p>‘ಟಿಕೆಟ್ ಪಡೆದಿದ್ದ ಬಹುತೇಕರು ಆಗಸ್ಟ್ 15ರಂದು ಕಾಲೇಜು ಬಳಿ ಬಂದಿದ್ದರು. ಸಭಾಭವನ ಭರ್ತಿಯಾಗಿದ್ದರಿಂದ, ಕ್ರಮೇಣ ಪ್ರವೇಶ ನಿರ್ಬಂಧಿಸಲಾಗಿತ್ತು. ಗೇಟ್ ಬಂದ್ ಮಾಡಿದ್ದರಿಂದ, 6 ಸಾವಿರದಿಂದ 8 ಸಾವಿರ ಜನ ಹೊರಗೆ ರಸ್ತೆ ಮೇಲೆ ನಿಂತಿದ್ದರು. ಒಳಗೆ ಬಿಡುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಿದ್ದರು. ಸಾರ್ವಜನಿಕರ ವಾಹನ ಓಡಾಟಕ್ಕೂ ಅಡ್ಡಿಪಡಿಸಿದ್ದರು. ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಸ್ಥಿತಿ ನಿಭಾಯಿಸಿದ್ದರು.’</p>.<p>‘ಕಾರ್ಯಕ್ರಮ ನಡೆಸಲು ಕಾಲೇಜಿ ನವರು ಅನುಮತಿ ಪಡೆದಿರಲಿಲ್ಲ. ಅಕ್ರಮವಾಗಿ ತಡೆಯುವುದು (ಐಪಿಸಿ 341), ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ (ಐಪಿಸಿ 283) ಹಾಗೂ ಅಕ್ರಮ ಕೂಟ (ಐಪಿಸಿ 143) ಆರೋಪದಡಿ ಕಾಲೇಜು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>