‘ಟಿಕೆಟ್ ಪಡೆದಿದ್ದ ಬಹುತೇಕರು ಆಗಸ್ಟ್ 15ರಂದು ಕಾಲೇಜು ಬಳಿ ಬಂದಿದ್ದರು. ಸಭಾಭವನ ಭರ್ತಿಯಾಗಿದ್ದರಿಂದ, ಕ್ರಮೇಣ ಪ್ರವೇಶ ನಿರ್ಬಂಧಿಸಲಾಗಿತ್ತು. ಗೇಟ್ ಬಂದ್ ಮಾಡಿದ್ದರಿಂದ, 6 ಸಾವಿರದಿಂದ 8 ಸಾವಿರ ಜನ ಹೊರಗೆ ರಸ್ತೆ ಮೇಲೆ ನಿಂತಿದ್ದರು. ಒಳಗೆ ಬಿಡುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಿದ್ದರು. ಸಾರ್ವಜನಿಕರ ವಾಹನ ಓಡಾಟಕ್ಕೂ ಅಡ್ಡಿಪಡಿಸಿದ್ದರು. ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಸ್ಥಿತಿ ನಿಭಾಯಿಸಿದ್ದರು.’