ಸಂತ್ರಸ್ತೆಯರಿಂದ ಹೇಳಿಕೆ ಸಂಗ್ರಹ: ‘ಸಹಾಯವಾಣಿಗೆ ನಿತ್ಯವೂ ಕರೆಗಳು ಬರುತ್ತಿವೆ. ಕೆಲ ಸಂತ್ರಸ್ತೆಯರು, ಹೇಳಿಕೆ ನೀಡುವುದಾಗಿ ಹೇಳಿದ್ದಾರೆ. ಅವರಿಗೆ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಸಂತ್ರಸ್ತೆಯರಿಗೆ ಹಾಗೂ ಅವರ ಕುಟುಂಬದವರಿಗೆ ಧೈರ್ಯ ತುಂಬಿದ ಬಳಿಕವೇ ಹೇಳಿಕೆ ದಾಖಲಿಸಿಕೊಂಡು, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.