‘ತಾಯಿ ಭುವನೇಶ್ವರಿಗೆ ಹಾಗೂ ಸಮಸ್ತ ಕನ್ನಡಿಗರಿಗೆ ಹೃದಯಪೂರ್ವಕ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಹೇಳುತ್ತಲೇ ಭಾಷಣ ಆರಂಭಿಸಿದ ರಾಷ್ಟ್ರಪತಿ, ಕರ್ನಾಟಕದ ಪರಂಪರೆ, ವಿವಿಧ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಕನ್ನಡಿಗರ ಪ್ರೀತಿ, ಹೃದಯ ವೈಶಾಲ್ಯ, ತೋರಿದ ಅಭಿಮಾನ, ಸತ್ಕಾರ, ಕನ್ನಡಿಗರ ಮೃದು ಸ್ವಭಾವ, ಶಾಂತಿಪ್ರಿಯತೆ, ಉದಾರ
ಮನೋಭಾವನೆಯನ್ನು ಪ್ರಶಂಸಿಸಿದರು.