ಚಾಣಕ್ಯ ವಿಶ್ವವಿದ್ಯಾಲಯ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶೇಷ ಉಪನ್ಯಾಸದಲ್ಲಿ ‘ಭಾರತೀಯ ಆರ್ಥಿಕತೆಯಲ್ಲಿ ಪ್ರಮುಖ ಪರಿವರ್ತನೆಗಳು’ ವಿಷಯದ ಬಗ್ಗೆ ಮಾತನಾಡಿದರು. ‘ಉಚಿತ ಕೊಡುಗೆಗಳು ದೇಶದ ಅರ್ಥ ವ್ಯವಸ್ಥೆಗೆ ಒಳಿತು ಮಾಡುವುದಿಲ್ಲ. ಅರ್ಹ ಬಡವರಿಗೆ ಸಬ್ಸಿಡಿ ನೀಡಬೇಕು. ಆದರೆ, ಏನನ್ನೂ ಉಚಿತವಾಗಿ ನೀಡಬಾರದು. ಚೀನಾದ ಸರ್ಕಾರಿ ಬ್ಯಾಂಕ್ ನೀಡಿದ್ದ ಸಾಲವನ್ನು ಭರಿಸಲಾಗದೆ ಶ್ರೀಲಂಕಾ ದಿವಾಳಿ ಹಂತಕ್ಕೆ ತಲುಪಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯು ಶ್ರೀಲಂಕಾದ ಸಾಲವನ್ನು ಮರು ರಚನೆ ಮಾಡುತ್ತಿದೆ’ ಎಂದು ಹೇಳಿದರು.