‘ಬಟ್ಟೆ ವ್ಯಾಪಾರ ಮಾಡುತ್ತಿರುವ ಭಾಗ್ಯಲಕ್ಷ್ಮಿ ಎಂಬುವರು ರಾಮಚಂದ್ರಾಪುರದ 1ನೇ ಮುಖ್ಯರಸ್ತೆಯಲ್ಲಿ ನೆಲೆಸಿದ್ದಾರೆ. ಅವರ ಸ್ನೇಹಿತೆಯಾಗಿದ್ದ ಆರೋಪಿ ಶಶಿಕಲಾ, ಇದೇ 5ರಂದು ಬೆಳಿಗ್ಗೆ 8.30ರ ಸುಮಾರಿಗೆ ಮನೆಗೆ ಹೋಗಿದ್ದರು. ಸ್ನೇಹಿತೆಯನ್ನು ಬರಮಾಡಿಕೊಂಡು ಟೀ ಮಾಡಿಕೊಟ್ಟಿದ್ದ ಭಾಗ್ಯಲಕ್ಷ್ಮಿ, ಅಂಗಡಿಗೆ ಹೋಗುವ ಅವಸರದಲ್ಲಿ ಬೀರುವಿಗೆ ಬೀಗ ಹಾಕುವುದನ್ನು ಮರೆತಿದ್ದರು. ಕೆಲ ಹೊತ್ತು ಆರೋಪಿ ಜೊತೆ ಮಾತನಾಡಿ ಬೀಳ್ಕೊಟ್ಟು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು.’