ಗಾಂಧೀಜಿ 50ನೇ ವರ್ಷದವರೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಬರಲಿಲ್ಲ. ನೆಹರೂ ಬಂದಿರಲಿಲ್ಲ, ಅವರ ತಂದೆಯೂ ಬಂದಿರಲಿಲ್ಲ. ವಿದ್ಯಾಭ್ಯಾಸ ಮಾಡಿ, ಲೌಕಿಕವಾದ, ಭೌತಿಕವಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡು ಜೀವನ ಭದ್ರವಾದ ಮೇಲೆ ಸಮಾಜ ಸೇವೆಗಾಗಿ ಬಂದರು. ದಾದಾಬಾಯಿ ನವರೋಜಿ, ನ್ಯಾ. ರಾನಡೆ, ಫಿರೋಜ್ ಶಾ ಸಹಿತ ಕಾಂಗ್ರೆಸ್ನ ಆಗಿನ ಬಹುತೇಕ ಹೊರಾಟಗಾರರು ಇದೇ ರೀತಿಯವರು ಎಂದು ಹೇಳಿದರು.