‘ಬಹುಮುಖ ವ್ಯಕ್ತಿತ್ವದ ವಿಮರ್ಶಕ ಗಿರಡ್ಡಿ ಅವರು ಕಥೆ, ಕಾವ್ಯ ಸೇರಿದಂತೆ ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ನವ್ಯದ ಕಾಲದಲ್ಲಿ ಗಂಭೀರ ಸಾಹಿತ್ಯ ಇರದಿದ್ದರೂ ತಮ್ಮ ಬರವಣಿಗೆಚಾತುರ್ಯ ಮೂಲಕ ಅನೇಕ ಭಾವನೆಯನ್ನು ಕೃತಿಗಳಲ್ಲಿ ಹೊರಹಾಕುತ್ತಿದ್ದರು. ತಮ್ಮ ಕಾಲದ ಬಹುತೇಕ ಸಾಹಿತಿಗಳ ಕೃತಿಯನ್ನು ವಸ್ತುನಿಷ್ಠವಾಗಿ ವಿಮರ್ಶೆಗೆ ಒಳಪಡಿಸಿ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಅವಶ್ಯಕತೆಯನ್ನು ಹೆಕ್ಕಿ ತೆಗೆದಿದ್ದಾರೆ’ಎಂದು ತಿಳಿಸಿದರು.