<p><strong>ಬೆಂಗಳೂರು:</strong> ಆಟೊ ಬಾಡಿಗೆ ಪಡೆದಿದ್ದ ಮೂವರು ಯುವತಿಯರು, ಚಾಲಕನ ಜೊತೆ ಜಗಳ ತೆಗೆದು ಕಪಾಳಕ್ಕೆ ಹೊಡೆದು ಪರಾರಿಯಾಗಿದ್ದಾರೆ.</p>.<p>ಆ ಸಂಬಂಧ ಹೈಗ್ರೌಂಡ್ಸ್ ಠಾಣೆಗೆ ಆಟೊ ಚಾಲಕ ಸುರೇಂದ್ರ ಬಾಬು ದೂರು ನೀಡಿದ್ದಾರೆ. ಯುವತಿಯರ ವಿರುದ್ಧ ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.</p>.<p>‘ನಾಗದೇವನಹಳ್ಳಿ ನಿವಾಸಿಯಾದ ನಾನು ಮೇ 29ರಂದು ರಾತ್ರಿ 8.30ರ ಸುಮಾರಿಗೆ ಎಂ.ಜಿ. ರಸ್ತೆಯಲ್ಲಿ ಆಟೊ ಸಮೇತ ನಿಂತಿದ್ದೆ.ವಿಜಯನಗರದ ಹೊಸಹಳ್ಳಿ ಬಳಿ ಬಿಡುವಂತೆ ಮೂವರು ಯುವತಿಯರು ಆಟೊ ಬಾಡಿಗೆ ಪಡೆದಿದ್ದರು’ ಎಂದು ಸುರೇಂದ್ರ ದೂರಿನಲ್ಲಿ ಹೇಳಿದ್ದಾರೆ.</p>.<p>‘ಮದ್ಯದ ಅಮಲಿನಲ್ಲಿದ್ದ ಯುವತಿಯರು ಮಾರ್ಗ ಮಧ್ಯೆ ಕಿರುಚಾಡಲು ಆರಂಭಿಸಿದ್ದರು. ಅದನ್ನು ಪ್ರಶ್ನಿಸಿದಾಗ ಸುಮ್ಮನಿರುವಂತೆ ನನ್ನನ್ನು ಬೆದರಿಸಿದರು. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ. ಆಟೊ ನಿಲ್ಲಿಸುತ್ತಿದ್ದಂತೆ ಮೂವರೂ ಇಳಿದು ಸ್ಥಳದಿಂದ ಹೊರಟು ಹೋಗಿದ್ದಾರೆ. ಯುವತಿಯರು ಬಗ್ಗೆ ಗೊತ್ತಿಲ್ಲ’ ಎಂದೂ ದೂರಿನಲ್ಲಿದೆ.</p>.<p>‘ಯುವತಿಯರಿರುವ ಫೋಟೊವನ್ನು ದೂರಿನ ಜೊತೆ ಸುರೇಂದ್ರ ಕೊಟ್ಟಿದ್ದಾರೆ. ಎನ್ಸಿಆರ್ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆಟೊ ಬಾಡಿಗೆ ಪಡೆದಿದ್ದ ಮೂವರು ಯುವತಿಯರು, ಚಾಲಕನ ಜೊತೆ ಜಗಳ ತೆಗೆದು ಕಪಾಳಕ್ಕೆ ಹೊಡೆದು ಪರಾರಿಯಾಗಿದ್ದಾರೆ.</p>.<p>ಆ ಸಂಬಂಧ ಹೈಗ್ರೌಂಡ್ಸ್ ಠಾಣೆಗೆ ಆಟೊ ಚಾಲಕ ಸುರೇಂದ್ರ ಬಾಬು ದೂರು ನೀಡಿದ್ದಾರೆ. ಯುವತಿಯರ ವಿರುದ್ಧ ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.</p>.<p>‘ನಾಗದೇವನಹಳ್ಳಿ ನಿವಾಸಿಯಾದ ನಾನು ಮೇ 29ರಂದು ರಾತ್ರಿ 8.30ರ ಸುಮಾರಿಗೆ ಎಂ.ಜಿ. ರಸ್ತೆಯಲ್ಲಿ ಆಟೊ ಸಮೇತ ನಿಂತಿದ್ದೆ.ವಿಜಯನಗರದ ಹೊಸಹಳ್ಳಿ ಬಳಿ ಬಿಡುವಂತೆ ಮೂವರು ಯುವತಿಯರು ಆಟೊ ಬಾಡಿಗೆ ಪಡೆದಿದ್ದರು’ ಎಂದು ಸುರೇಂದ್ರ ದೂರಿನಲ್ಲಿ ಹೇಳಿದ್ದಾರೆ.</p>.<p>‘ಮದ್ಯದ ಅಮಲಿನಲ್ಲಿದ್ದ ಯುವತಿಯರು ಮಾರ್ಗ ಮಧ್ಯೆ ಕಿರುಚಾಡಲು ಆರಂಭಿಸಿದ್ದರು. ಅದನ್ನು ಪ್ರಶ್ನಿಸಿದಾಗ ಸುಮ್ಮನಿರುವಂತೆ ನನ್ನನ್ನು ಬೆದರಿಸಿದರು. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ. ಆಟೊ ನಿಲ್ಲಿಸುತ್ತಿದ್ದಂತೆ ಮೂವರೂ ಇಳಿದು ಸ್ಥಳದಿಂದ ಹೊರಟು ಹೋಗಿದ್ದಾರೆ. ಯುವತಿಯರು ಬಗ್ಗೆ ಗೊತ್ತಿಲ್ಲ’ ಎಂದೂ ದೂರಿನಲ್ಲಿದೆ.</p>.<p>‘ಯುವತಿಯರಿರುವ ಫೋಟೊವನ್ನು ದೂರಿನ ಜೊತೆ ಸುರೇಂದ್ರ ಕೊಟ್ಟಿದ್ದಾರೆ. ಎನ್ಸಿಆರ್ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>