ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ವಾರ್ಡ್ನ ರಜತಾದ್ರಿ ಬಡಾವಣೆ, ಗಾಯತ್ರಿ ತಪೋವನ ಬಡಾವಣೆ, ವೆಂಕಟೇಶ್ವರ ಬಡಾವಣೆ, ಪವಮಾನ ಬಡಾವಣೆ ಸೇರಿದಂತೆ ಈ ಭಾಗದ ಪ್ರದೇಶಗಳಲ್ಲಿ ಡಾಂಬರೀಕರಣವನ್ನು ಒಂದು ವಾರದಿಂದೀಚೆಗೆ ಮಾಡಲಾಗುತ್ತಿದೆ. ಆದರೆ, ಡಾಂಬರು ಹಪ್ಪಳದಂತೆ ಎದ್ದು ಬರುತ್ತಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.