<p><strong>ಬೆಂಗಳೂರು:</strong> ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊಸದಾಗಿ ಸ್ಥಾಪಿಸಿರುವ ‘ಸಂತ ಶಿಶುನಾಳ ಶರೀಫ ಮತ್ತು ಅವರ ಗುರುಗಳಾದ ಕಳಸದ ಗೋವಿಂದ ಭಟ್ಟರ ದತ್ತಿ’ ಪುರಸ್ಕಾರಕ್ಕೆ ಯಜಮಾನ್ ಎಂಟರ್ಪ್ರೈಸಸ್ ಸಂಸ್ಥೆಯ ದಿವಂಗತ ಶ್ರೀಹರಿ ಖೋಡೆ ಅವರನ್ನು ಆಯ್ಕೆ ಮಾಡಲಾಗಿದೆ.</p><p>ಶ್ರೀಹರಿ ಖೋಡೆ ಅವರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದರು. ಕಾವೇರಿ ದಂಡೆಯಲ್ಲಿ ಅವರು ಜೀರ್ಣೋದ್ದಾರಗೊಳಿಸಿದ ವೇಣುಗೋಪಾಲ ಸ್ವಾಮಿ ದೇಗುಲ ಉತ್ತಮ ವಾಸ್ತುಶಿಲ್ಪ ಎನ್ನಿಸಿಕೊಂಡಿದೆ.</p><p>‘ಮೈಸೂರು ಮಲ್ಲಿಗೆ’, ‘ನಾಗಮಂಡಲ’ ಚಿತ್ರ ಗಳನ್ನು ನಿರ್ಮಿಸಿರುವ ಅವರು, 2016ರಲ್ಲಿ ನಿಧನರಾದರು. ಅವರ ಪರಂಪರೆಯನ್ನು ‘ಯಜಮಾನ್ ಎಂಟರ್ಪ್ರೈಸಸ್’ ಮುಂದುವರಿಸುತ್ತಿದೆ. ಹೀಗಾಗಿ ಅವರದ್ದೇ ಆದ ಈ ಸಂಸ್ಥೆ, ಅವರ ಹೆಸರು ಎರಡನ್ನೂ ಸೇರಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊಸದಾಗಿ ಸ್ಥಾಪಿಸಿರುವ ‘ಸಂತ ಶಿಶುನಾಳ ಶರೀಫ ಮತ್ತು ಅವರ ಗುರುಗಳಾದ ಕಳಸದ ಗೋವಿಂದ ಭಟ್ಟರ ದತ್ತಿ’ ಪುರಸ್ಕಾರಕ್ಕೆ ಯಜಮಾನ್ ಎಂಟರ್ಪ್ರೈಸಸ್ ಸಂಸ್ಥೆಯ ದಿವಂಗತ ಶ್ರೀಹರಿ ಖೋಡೆ ಅವರನ್ನು ಆಯ್ಕೆ ಮಾಡಲಾಗಿದೆ.</p><p>ಶ್ರೀಹರಿ ಖೋಡೆ ಅವರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದರು. ಕಾವೇರಿ ದಂಡೆಯಲ್ಲಿ ಅವರು ಜೀರ್ಣೋದ್ದಾರಗೊಳಿಸಿದ ವೇಣುಗೋಪಾಲ ಸ್ವಾಮಿ ದೇಗುಲ ಉತ್ತಮ ವಾಸ್ತುಶಿಲ್ಪ ಎನ್ನಿಸಿಕೊಂಡಿದೆ.</p><p>‘ಮೈಸೂರು ಮಲ್ಲಿಗೆ’, ‘ನಾಗಮಂಡಲ’ ಚಿತ್ರ ಗಳನ್ನು ನಿರ್ಮಿಸಿರುವ ಅವರು, 2016ರಲ್ಲಿ ನಿಧನರಾದರು. ಅವರ ಪರಂಪರೆಯನ್ನು ‘ಯಜಮಾನ್ ಎಂಟರ್ಪ್ರೈಸಸ್’ ಮುಂದುವರಿಸುತ್ತಿದೆ. ಹೀಗಾಗಿ ಅವರದ್ದೇ ಆದ ಈ ಸಂಸ್ಥೆ, ಅವರ ಹೆಸರು ಎರಡನ್ನೂ ಸೇರಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>