ಮಹಿಳಾ ಮತ್ತು ಮಕ್ಕಳ ಇಲಾಖೆಯ ತಾಲ್ಲೂಕು ಅಧಿಕಾರಿ ಶಶಿಧರ್, ‘ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದಿರುವುದು, ಬ್ಯಾಂಕ್ ಪಾಸ್ಪುಸ್ತಕ ಹಾಗೂ ಆಧಾರ್ ಮಾಹಿತಿ ಹೊಂದಾಣಿಕೆ ಆಗದಿರುವುದು, ಕೆವೈಸಿ ಇಲ್ಲದಿರುವುದು ಸೇರಿದಂತೆ ಹಲವು ಕಾರಣದಿಂದ ಹಣ ಜಮೆ ತಡವಾಗಿದೆ. ಅರ್ಜಿ ವಿಲೇವಾರಿ ಮಾಡಲು ಸದ್ಯ ಒಂದೇ ಕಂಪ್ಯೂಟರ್ ಇದೆ. ನಾಳೆಯಿಂದ ನಾಲ್ಕು ಕಂಪ್ಯೂಟರ್ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು’ ಎಂದರು.