ದೂರದೃಷ್ಟಿ ಹೊಂದಿದ್ದ ಜಿ.ಎಸ್.ಎಸ್:‘ಭೇದ ಭಾವವಿಲ್ಲದ, ಎಲ್ಲರನ್ನೂ ಒಳಗೊಳ್ಳುವ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸುವ ದೂರದೃಷ್ಟಿ ಸಾಮರ್ಥ್ಯವನ್ನು ಜಿ.ಎಸ್.ಎಸ್.ಹೊಂದಿದ್ದರು. ಅವರ ಕಾಲಘಟ್ಟದಲ್ಲಿರಾಜ್ಯದ ಎಲ್ಲ ವಿ.ವಿಗಳ ಪ್ರಸಾರಾಂಗ ವಿಭಾಗಗಳು ಕರಪತ್ರ ಸೇರಿದಂತೆ ಹಲವು ಕೃತಿ ಪ್ರಕಟಿಸುವ ಮೂಲಕ ಓದುಗರ ಸಂಖ್ಯೆ ಹೆಚ್ಚಿಸುವ, ಜ್ಞಾನ ವೃದ್ಧಿಸುವ ಕೆಲಸ ಮಾಡಿದವು’ ಎಂದು ಸಿದ್ಧರಾಮಯ್ಯ ಹೇಳಿದರು.