‘35 ವರ್ಷಗಳ ಹಿಂದೆ ತಂದೆಗೆ ಜನತಾ ಮನೆ ಮಂಜೂರಾಗಿತ್ತು. ನಾನೂ ಅದೇ ಮನೆಯಲ್ಲಿ ಆಟವಾಡಿ ಬೆಳೆದೆ. ನಮ್ಮ ತಂದೆ ತೀರಿ ಹೋದರು. ತಾಯಿ ಮಾತ್ರ ಅಲ್ಲಿ ವಾಸವಿದ್ದರು. ಮಳೆಗೆ ಮನೆಯ ಗೋಡೆ ಕುಸಿದು ಹೋಯಿತು. ಆ ಸಂದರ್ಭದಲ್ಲಿ ನಾನು ಸಂತ್ರಸ್ತ ಗ್ರಾಮಗಳಲ್ಲಿದ್ದೆ. ನಾನು ಸಚಿವನಾಗಿದ್ದರೂ ನನಗಾಗಿ ಮನೆ ಕಟ್ಟಿಸಿಕೊಳ್ಳಲಿಲ್ಲ. ಈಗ ಊರಿನಲ್ಲಿದ್ದ ಮನೆಯೂ ಬಿದ್ದು ಹೋಗಿದೆ. ತಂದೆ ಕಟ್ಟಿಸಿದ ಮನೆ ಎಂಬ ಕಾರಣಕ್ಕೆ ನಮ್ಮ ತಾಯಿಗೆ ಆ ಮನೆ ಮೇಲೆ ಅಪಾರ ಪ್ರೀತಿ ಇದೆ. ಈಗ ಅಲ್ಲಿ ಚಿಕ್ಕದೊಂದು ಮನೆ ಕಟ್ಟಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದರು.