ಬೆಂಗಳೂರು: ನಗರದ ಅರಮನೆ ಮೈದಾದನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ ‘ಬೆಂಗಳೂರು ಪುಸ್ತಕೋತ್ಸವ’ಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಂಗಳವಾರ ಭೇಟಿ ನೀಡಿದರು.
ಇದನ್ನೂ ಓದಿ:ಪುಸ್ತಕೋತ್ಸವದ ಸುಗ್ಗಿ ಮತ್ತೆ ಬಂತು
ಮಹಾತ್ಮಾ ಗಾಂಧಿಯವರ ಆತ್ಮಚರಿತ್ರೆಯ ಇಂಗ್ಲಿಷ್ ಆವೃತ್ತಿ, ಗಾಂಧಿಜಿ ಕುರಿತ ಇತರ ಪುಸ್ತಕಗಳು, ಶತಮಾನಗಳಷ್ಟು ಹಳೆಯದಾದ ‘ಯೂರೋಪಿಯನ್ ಹಿಸ್ಟ್ರಿ’ ಹಾಗೂ ‘ಮಾರಲ್ಸ್ ಆಫ್ ಟುಮಾರೋ’ ಪುಸ್ತಕಗಳನ್ನು ಅವರು ಖರೀದಿಸಿದರು.
ಸೋಮವಾರ ಆರಂಭಗೊಂಡಿರುವ ಪುಸ್ತಕೋತ್ಸವ ಭಾನುವಾರ (ಅಕ್ಟೋಬರ್ 21) ವರೆಗೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.