ಶಿಬಿರದಲ್ಲಿ ತಜ್ಞವೈದ್ಯರ ಸಲಹೆ, ಹೃದಯ ಸಂಬಂಧಿ ಪರೀಕ್ಷೆ, ಕಣ್ಣಿನ ಪರೀಕ್ಷೆ, ಮೂಳೆ ತಜ್ಞರಿಂದ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಮಧುಮೇಹ ಪರೀಕ್ಷೆ, ಪಲ್ಮನರಿ ಫಂಕ್ಷನ್ ಪರೀಕ್ಷೆ, ಮೆಮೋಗ್ರಾಮ್ ಪರೀಕ್ಷೆ ಹಾಗೂ ಮೂಳೆ ಸಾಂದ್ರತೆ ಪರೀಕ್ಷೆಯ ಸೌಲಭ್ಯ ಇರಲಿದೆ. ಅವಶ್ಯವಿದ್ದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ, ಔಷಧ ಹಾಗೂ ಔಷಧ ಕಿಟ್ ವಿತರಣೆ ಮತ್ತು ಅಂಗವಿಕಲರಿಗೆ ನೆರವು ನೀಡಲು ಕ್ರಮ ವಹಿಸಲಾಗುವುದು ಎಂದು ಟ್ರಸ್ಟ್ ಗೌರವಾಧ್ಯಕ್ಷ ಪ್ರವೀಣ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.