<figcaption>""</figcaption>.<figcaption>""</figcaption>.<figcaption>""</figcaption>.<figcaption>""</figcaption>.<figcaption>""</figcaption>.<p><strong>ಬೆಂಗಳೂರು:</strong>ನಗರದಲ್ಲಿ ಜೋರು ಮಳೆ ಆಗುತ್ತಿದ್ದು, ಬಹುತೇಕ ಪ್ರದೇಶಗಳಲ್ಲಿ ವರುಣ ಅರ್ಭಟಿಸಿ ಸುರಿಯುತ್ತಿದ್ದಾನೆ.</p>.<p>ರಾಜಾಜಿನಗರ, ವಿಜಯನಗರ, ಯಶವಂತಪುರ, ಪೀಣ್ಯ, ಶಾಂತಿನಗರ, ಮೆಜೆಸ್ಟಿಕ್, ಗಾಂಧಿನಗರ, ಬಸವನಗುಡಿ, ಆರ್.ಟಿ.ನಗರ, ಹೆಬ್ಬಾಳ, ಮಡಿವಾಳ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ ಹಾಗೂ ಸುತ್ತಮುತ್ತ ಮಳೆ ಜೋರಾಗಿದೆ.</p>.<p>ಬೆಳಿಗ್ಗೆಯಿಂದಲೂ ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಹಲವೆಡೆ ಜೋರಾಗಿ ಮಳೆ ಆರಂಭವಾಗಿದೆ. ಸಂಜೆಯೂ ಮಳೆ ಪ್ರಮಾಣ ಹೆಚ್ಚಿದ್ದರಿಂದ, ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು.</p>.<p>ಹಲವು ಕೆಳ ಸೇತುವೆಗಳಲ್ಲಿ ನೀರು ಹರಿಯುತ್ತಿದ್ದು, ಅದರಲ್ಲಿ ವಾಹನಗಳು ಸಂಚರಿಸುತ್ತಿವೆ. ಕೆಲ ವಾಹನಗಳು ಕೆಟ್ಟಿದ್ದು, ಅವುಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದೆ. ಅದರಿಂದ ದಟ್ಟಣೆಯೂ ಉಂಟಾಗಿದೆ.</p>.<p>'ನಗರದಲ್ಲಿ ಜೋರು ಮಳೆ ಇದೆ. ದಕ್ಷಿಣ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ರಸ್ತೆಯಲ್ಲಿ ನೀರು ನಿಂತಿರುವ ದೂರುಗಳು ಬಂದಿವೆ. ಮಳೆ ಕಡಿಮೆಯಾದ ನಂತರ ಹಾನಿ ಬಗ್ಗೆ ಮತ್ತಷ್ಟು ದೂರು ಬರಬಹುದು' ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದರು.</p>.<p>ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದೆ.ಸಂಜೆ ಸುರಿದ ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.</p>.<p><strong>ಮೂರು ಗಂಟೆ ನಿರಂತರ ಮಳೆ:</strong> ಗಾಂಧಿ ಬಜಾರು ಮತ್ತು ಸುತ್ತಮುತ್ತಲಪ್ರದೇಶದಲ್ಲಿ ಹಬ್ಬದ ವ್ಯಾಪಾರಕ್ಕಾಗಿ ಹೂವು, ಹಣ್ಣು, ಬಾಳೆ ಮಾರಾಟಕ್ಕೆ ಬಂದಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆ ಬಸವನಗುಡಿ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದೆ, ರಸ್ತೆ ತುಂಬೆಲ್ಲ ಮಣ್ಣು–ಕಲ್ಲು ತುಂಬಿದೆ.</p>.<div style="text-align:center"><figcaption><em><strong>ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಸಮೀಪ ಶುಕ್ರವಾರ ಸಂಜೆ ಕಂಡು ಬಂದ ದೃಶ್ಯ</strong></em></figcaption></div>.<p><strong>ರಾಮನಗರದಲ್ಲೂ ಮಳೆ</strong></p>.<p>ರಾಮನಗರದಲ್ಲಿ ಸಂಜೆ ಕೆಲ ಹೊತ್ತು ಉತ್ತಮ ಮಳೆ ಸುರಿಯಿತು. ಮೋಡಗಳು ಕವಿದಿದ್ದು ಮತ್ತೆ ಮಳೆ ಆಗುವ ನಿರೀಕ್ಷೆ ಇದೆ.ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸತತವಾಗಿ ವರ್ಷಧಾರೆ ಆಗುತ್ತಿದೆ. ಇದರಿಂದ ಸೊಪ್ಪು, ತರಕಾರಿ, ವೀಳ್ಯದೆಲೆ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ.</p>.<figcaption><strong>ಮಳೆಯಿಂದಾಗಿ ಮಂಚನಬೆಲೆ ಜಲಾಶಯ ಭರ್ತಿ ಆಗಿದ್ದು, ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ರಾಮನಗರ ಬಳಿ ಅರ್ಕಾವತಿ ಮೈದುಂಬಿ ಹರಿಯುತ್ತಿದೆ</strong></figcaption>.<div style="text-align:center"><figcaption><strong>ಮಳೆಯಿಂದಾಗಿ ಮಾಗಡಿಯಲ್ಲಿ ಹುರುಳಿ ಬೆಳೆ ಜಲಾವೃತಗೊಂಡಿದೆ</strong></figcaption></div>.<p><strong>ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ರಾಜಕಾಲುವೆ</strong></p>.<p>ಬೆಂಗಳೂರಿನ ಬನಶಂಕರಿ 6ನೇ ಹಂತದಲ್ಲಿ ಮಧ್ಯಾಹ್ನ 3.45ರಿಂದ ಆರಂಭವಾದ ಬಿರುಸಿನ ಮಳೆ ಸುಮಾರು ಮೂರು ಗಂಟೆಗಳಕಾಲ ಸತತವಾಗಿ ಸುರಿದಿದೆ.</p>.<p>ಪರಿಣಾಮವಾಗಿ ಬಡಾವಣೆಯಲ್ಲಿದ್ದ ರಾಜಕಾಲುವೆಗಳಲ್ಲ ಭರ್ತಿಯಾಗಿವೆ. ಆರನೇ ಹಂತದಲ್ಲಿರುವ ಮುಖ್ಯ ರಾಜಕಾಲುವೆ ಅಪಾಯಮಟ್ಟದಲ್ಲಿ ತುಂಬಿ ಹರಿದಿದೆ.</p>.<p>ರಾಜಕಾಲುವೆಯಿಂದ ಹರಿದ ನೀರು ಇದೇ ಬಡಾವಣೆಯಲ್ಲಿರುವ ಐದು ಎಕರೆ ವಿಸ್ತೀರ್ಣದ ಬಿಡಿಎ ಉದ್ಯಾನದೊಳಗೆ (ಶಿಲ್ಪೋದ್ಯಾನ) ನುಗಿದೆ. ಪರಿಣಾಮವಾಗಿ ಇಡೀ ಉದ್ಯಾನ ನೀರಿನಲ್ಲಿ ಮುಳುಗಿದೆ. ಸಂಜೆ 6.30ಗಂಟೆಗೆ ಮಳೆ ಬಿಡುವುಕೊಟ್ಟಿದೆ.</p>.<figcaption><strong>ಬೆಂಗಳೂರಿನ ಬನಶಂಕರಿ ಆರನೇ ಹಂತದಲ್ಲಿರುವ ರಾಜಕಾಲುವೆ ತುಂಬಿ ಹರಿಯುತ್ತಿರುವ ದೃಶ್ಯ.</strong></figcaption>.<figcaption><strong>ಮಳೆ ನೀರಿನಿಂದ ಭರ್ತಿಯಾಗಿರುಬ ಬನಶಂಕರಿ 6ನೇ ಹಂತದಲ್ಲಿರುವ ಬಿಡಿಎ ಪಾರ್ಕ್ (ಶಿಲ್ಪೋದ್ಯಾನ)</strong></figcaption>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<figcaption>""</figcaption>.<figcaption>""</figcaption>.<figcaption>""</figcaption>.<figcaption>""</figcaption>.<p><strong>ಬೆಂಗಳೂರು:</strong>ನಗರದಲ್ಲಿ ಜೋರು ಮಳೆ ಆಗುತ್ತಿದ್ದು, ಬಹುತೇಕ ಪ್ರದೇಶಗಳಲ್ಲಿ ವರುಣ ಅರ್ಭಟಿಸಿ ಸುರಿಯುತ್ತಿದ್ದಾನೆ.</p>.<p>ರಾಜಾಜಿನಗರ, ವಿಜಯನಗರ, ಯಶವಂತಪುರ, ಪೀಣ್ಯ, ಶಾಂತಿನಗರ, ಮೆಜೆಸ್ಟಿಕ್, ಗಾಂಧಿನಗರ, ಬಸವನಗುಡಿ, ಆರ್.ಟಿ.ನಗರ, ಹೆಬ್ಬಾಳ, ಮಡಿವಾಳ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ ಹಾಗೂ ಸುತ್ತಮುತ್ತ ಮಳೆ ಜೋರಾಗಿದೆ.</p>.<p>ಬೆಳಿಗ್ಗೆಯಿಂದಲೂ ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಹಲವೆಡೆ ಜೋರಾಗಿ ಮಳೆ ಆರಂಭವಾಗಿದೆ. ಸಂಜೆಯೂ ಮಳೆ ಪ್ರಮಾಣ ಹೆಚ್ಚಿದ್ದರಿಂದ, ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು.</p>.<p>ಹಲವು ಕೆಳ ಸೇತುವೆಗಳಲ್ಲಿ ನೀರು ಹರಿಯುತ್ತಿದ್ದು, ಅದರಲ್ಲಿ ವಾಹನಗಳು ಸಂಚರಿಸುತ್ತಿವೆ. ಕೆಲ ವಾಹನಗಳು ಕೆಟ್ಟಿದ್ದು, ಅವುಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದೆ. ಅದರಿಂದ ದಟ್ಟಣೆಯೂ ಉಂಟಾಗಿದೆ.</p>.<p>'ನಗರದಲ್ಲಿ ಜೋರು ಮಳೆ ಇದೆ. ದಕ್ಷಿಣ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ರಸ್ತೆಯಲ್ಲಿ ನೀರು ನಿಂತಿರುವ ದೂರುಗಳು ಬಂದಿವೆ. ಮಳೆ ಕಡಿಮೆಯಾದ ನಂತರ ಹಾನಿ ಬಗ್ಗೆ ಮತ್ತಷ್ಟು ದೂರು ಬರಬಹುದು' ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದರು.</p>.<p>ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದೆ.ಸಂಜೆ ಸುರಿದ ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.</p>.<p><strong>ಮೂರು ಗಂಟೆ ನಿರಂತರ ಮಳೆ:</strong> ಗಾಂಧಿ ಬಜಾರು ಮತ್ತು ಸುತ್ತಮುತ್ತಲಪ್ರದೇಶದಲ್ಲಿ ಹಬ್ಬದ ವ್ಯಾಪಾರಕ್ಕಾಗಿ ಹೂವು, ಹಣ್ಣು, ಬಾಳೆ ಮಾರಾಟಕ್ಕೆ ಬಂದಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆ ಬಸವನಗುಡಿ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದೆ, ರಸ್ತೆ ತುಂಬೆಲ್ಲ ಮಣ್ಣು–ಕಲ್ಲು ತುಂಬಿದೆ.</p>.<div style="text-align:center"><figcaption><em><strong>ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಸಮೀಪ ಶುಕ್ರವಾರ ಸಂಜೆ ಕಂಡು ಬಂದ ದೃಶ್ಯ</strong></em></figcaption></div>.<p><strong>ರಾಮನಗರದಲ್ಲೂ ಮಳೆ</strong></p>.<p>ರಾಮನಗರದಲ್ಲಿ ಸಂಜೆ ಕೆಲ ಹೊತ್ತು ಉತ್ತಮ ಮಳೆ ಸುರಿಯಿತು. ಮೋಡಗಳು ಕವಿದಿದ್ದು ಮತ್ತೆ ಮಳೆ ಆಗುವ ನಿರೀಕ್ಷೆ ಇದೆ.ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸತತವಾಗಿ ವರ್ಷಧಾರೆ ಆಗುತ್ತಿದೆ. ಇದರಿಂದ ಸೊಪ್ಪು, ತರಕಾರಿ, ವೀಳ್ಯದೆಲೆ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ.</p>.<figcaption><strong>ಮಳೆಯಿಂದಾಗಿ ಮಂಚನಬೆಲೆ ಜಲಾಶಯ ಭರ್ತಿ ಆಗಿದ್ದು, ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ರಾಮನಗರ ಬಳಿ ಅರ್ಕಾವತಿ ಮೈದುಂಬಿ ಹರಿಯುತ್ತಿದೆ</strong></figcaption>.<div style="text-align:center"><figcaption><strong>ಮಳೆಯಿಂದಾಗಿ ಮಾಗಡಿಯಲ್ಲಿ ಹುರುಳಿ ಬೆಳೆ ಜಲಾವೃತಗೊಂಡಿದೆ</strong></figcaption></div>.<p><strong>ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ರಾಜಕಾಲುವೆ</strong></p>.<p>ಬೆಂಗಳೂರಿನ ಬನಶಂಕರಿ 6ನೇ ಹಂತದಲ್ಲಿ ಮಧ್ಯಾಹ್ನ 3.45ರಿಂದ ಆರಂಭವಾದ ಬಿರುಸಿನ ಮಳೆ ಸುಮಾರು ಮೂರು ಗಂಟೆಗಳಕಾಲ ಸತತವಾಗಿ ಸುರಿದಿದೆ.</p>.<p>ಪರಿಣಾಮವಾಗಿ ಬಡಾವಣೆಯಲ್ಲಿದ್ದ ರಾಜಕಾಲುವೆಗಳಲ್ಲ ಭರ್ತಿಯಾಗಿವೆ. ಆರನೇ ಹಂತದಲ್ಲಿರುವ ಮುಖ್ಯ ರಾಜಕಾಲುವೆ ಅಪಾಯಮಟ್ಟದಲ್ಲಿ ತುಂಬಿ ಹರಿದಿದೆ.</p>.<p>ರಾಜಕಾಲುವೆಯಿಂದ ಹರಿದ ನೀರು ಇದೇ ಬಡಾವಣೆಯಲ್ಲಿರುವ ಐದು ಎಕರೆ ವಿಸ್ತೀರ್ಣದ ಬಿಡಿಎ ಉದ್ಯಾನದೊಳಗೆ (ಶಿಲ್ಪೋದ್ಯಾನ) ನುಗಿದೆ. ಪರಿಣಾಮವಾಗಿ ಇಡೀ ಉದ್ಯಾನ ನೀರಿನಲ್ಲಿ ಮುಳುಗಿದೆ. ಸಂಜೆ 6.30ಗಂಟೆಗೆ ಮಳೆ ಬಿಡುವುಕೊಟ್ಟಿದೆ.</p>.<figcaption><strong>ಬೆಂಗಳೂರಿನ ಬನಶಂಕರಿ ಆರನೇ ಹಂತದಲ್ಲಿರುವ ರಾಜಕಾಲುವೆ ತುಂಬಿ ಹರಿಯುತ್ತಿರುವ ದೃಶ್ಯ.</strong></figcaption>.<figcaption><strong>ಮಳೆ ನೀರಿನಿಂದ ಭರ್ತಿಯಾಗಿರುಬ ಬನಶಂಕರಿ 6ನೇ ಹಂತದಲ್ಲಿರುವ ಬಿಡಿಎ ಪಾರ್ಕ್ (ಶಿಲ್ಪೋದ್ಯಾನ)</strong></figcaption>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>