ಬೆಂಗಳೂರು: ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಅಲ್ಲಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ.
ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆಯೂ ನಗರದಾದ್ಯಂತ ಅಬ್ಬರಿಸುತ್ತಿದೆ. ಬಿರುಗಾಳಿಗೆ ಕೆಲವೆಡೆ ಮರಗಳು ಧರೆಗುರುಳಿವೆ. ಕುಮಾರಕೃಪಾ ರಸ್ತೆಯಲ್ಲಿ ಕಾರು ಹಾಗೂ ಆಟೊದ ಮೇಲೆ ಮರದ ರೊಂಬೆಗಳು ಬಿದ್ದಿದ್ದು ಪ್ರಯಾಣಿಕರು ಪಾರಾಗಿದ್ಧಾರೆ. ಮಳೆಯೊಂದಿಗೆ ದಟ್ಟೈಸಿದ ಮೋಡದಿಂದ ಮಧ್ಯಾಹ್ನವೇ ಕಾರ್ಗತ್ತಲು ಆವರಿಸಿತ್ತು.
ಹೆಬ್ಬಾಳ, ಅಶೋಕ ನಗರ, ಆರ್ಟಿ ನಗರ, ಯಲಹಂಕ, ಮಲ್ಲೇಶ್ವರ, ಮೆಜೆಸ್ಟಿಕ್, ವಿಧಾನಸೌಧದ ಸುತ್ತಮುತ್ತ, ಸದಾಶಿವನಗರ, ಬಸವನಗುಡಿ, ಜಯನಗರ , ದೊಮ್ಮಲೂರು, ಹೊಸೂರು ರಸ್ತೆ ಭಾಗದಲ್ಲಿ ಅರ್ಧ ಗಂಟೆಯಿಂದ ನಿರಂತರ ಮಳೆಯಾಗುತ್ತಿದೆ