ಬೆಂಗಳೂರು: ನಗರದಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಳೆ ಗಾಳಿಗೆ ನಗರದ ಅಲ್ಲಲ್ಲಿ ಮರದ ರೊಂಬೆಗಳು ಉರುಳಿವೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆಗಳು ಉರುಳಿದ್ದು ಕಾರಿನಲ್ಲಿದ್ದವರು ಪಾರಾಗಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲೂ ಮರದ ರೊಂಬೆ ಕಾರೊಂದರ ಮೇಲೆ ಬಿದ್ದು ಜಖಂಗೊಂಡಿದೆ.