<p><strong>ಹೆಸರಘಟ್ಟ:</strong> ಗ್ರಾಮದ ಕೆರೆಯ ತಳಭಾಗದಲ್ಲಿದ್ದ ತೂಬನ್ನು ಭೂಮಾಲೀಕರು ಮುಚ್ಚಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಚಿಕ್ಕಬಾಣಾವರ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.</p>.<p>‘ಗಾಣಿಗರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಕೆರೆಗೊಂದು ತೂಬು ಇತ್ತು. ತಳಮಟ್ಟದ ನೀರು ಇಲ್ಲಿಂದ ಹರಿದು ಹೋಗುತ್ತಿತ್ತು. ಆದರೆ, ಭೂಮಾಲೀಕರು ಅದನ್ನು ಮುಚ್ಚಿದ್ದಾರೆ. ಆದರೆ, ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ರಮ ಕೈಗೊಂಡಿಲ್ಲ’ ಎಂದು ಸದಸ್ಯೆ ಭಾಗ್ಯಮ್ಮ ಕಿಡಿಕಾರಿದರು.</p>.<p>‘10 ವರ್ಷಗಳ ಹಿಂದೆ ಇದೇ ತೂಬಿನಲ್ಲಿ ಬಟ್ಟೆ ತೊಳೆಯುತ್ತಿದ್ದೆವು. ಜನರು ಕುಡಿಯಲು ನೀರನ್ನು ಇಲ್ಲಿಂದಲೇ ತೆಗೆದು ಕೊಂಡು ಹೋಗುತ್ತಿದ್ದರು. ತೂಬು ಇಲ್ಲದೇ ಇರುವುದರಿಂದ ತಳಮಟ್ಟದ ನೀರು ಹೊರಗೆ ಹೋಗದೆ ಕೆರೆ ಕಲುಷಿತಗೊಂಡಿದೆ. ತೂಬು ಮುಚ್ಚಿ<br />ದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ’ ಎಂದು ಅವರು ಅಧ್ಯಕ್ಷರಲ್ಲಿ ಮನವಿ ಮಾಡಿದರು.</p>.<p>‘ವಿಷಯ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತೂಬನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳೋಣ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೇಶವಮೂರ್ತಿ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಸರಘಟ್ಟ:</strong> ಗ್ರಾಮದ ಕೆರೆಯ ತಳಭಾಗದಲ್ಲಿದ್ದ ತೂಬನ್ನು ಭೂಮಾಲೀಕರು ಮುಚ್ಚಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಚಿಕ್ಕಬಾಣಾವರ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.</p>.<p>‘ಗಾಣಿಗರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಕೆರೆಗೊಂದು ತೂಬು ಇತ್ತು. ತಳಮಟ್ಟದ ನೀರು ಇಲ್ಲಿಂದ ಹರಿದು ಹೋಗುತ್ತಿತ್ತು. ಆದರೆ, ಭೂಮಾಲೀಕರು ಅದನ್ನು ಮುಚ್ಚಿದ್ದಾರೆ. ಆದರೆ, ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ರಮ ಕೈಗೊಂಡಿಲ್ಲ’ ಎಂದು ಸದಸ್ಯೆ ಭಾಗ್ಯಮ್ಮ ಕಿಡಿಕಾರಿದರು.</p>.<p>‘10 ವರ್ಷಗಳ ಹಿಂದೆ ಇದೇ ತೂಬಿನಲ್ಲಿ ಬಟ್ಟೆ ತೊಳೆಯುತ್ತಿದ್ದೆವು. ಜನರು ಕುಡಿಯಲು ನೀರನ್ನು ಇಲ್ಲಿಂದಲೇ ತೆಗೆದು ಕೊಂಡು ಹೋಗುತ್ತಿದ್ದರು. ತೂಬು ಇಲ್ಲದೇ ಇರುವುದರಿಂದ ತಳಮಟ್ಟದ ನೀರು ಹೊರಗೆ ಹೋಗದೆ ಕೆರೆ ಕಲುಷಿತಗೊಂಡಿದೆ. ತೂಬು ಮುಚ್ಚಿ<br />ದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ’ ಎಂದು ಅವರು ಅಧ್ಯಕ್ಷರಲ್ಲಿ ಮನವಿ ಮಾಡಿದರು.</p>.<p>‘ವಿಷಯ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತೂಬನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳೋಣ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೇಶವಮೂರ್ತಿ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>