‘ದಾಸನಪುರ ಉಪ ಮಾರುಕಟ್ಟೆಯಲ್ಲಿ ಮಳಿಗೆಯನ್ನು ಪಡೆದಿರುವ ವರ್ತಕರಿಗೆ ಯಶವಂತಪುರ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರ ಮಾಡಲ ಅವಕಾಶ ನೀಡುವುದಿಲ್ಲ ಹಾಗೂ ಎರಡು ಕಡೆ ಮಳಿಗೆಯನ್ನು ಪಡೆದವರ ಪರವಾನಗಿಯನ್ನು ರದ್ದು ಪಡಿಸಲಾಗುವುದು ಎಂದು ಆ. 19 ರಂದು ಅದೇಶವನ್ನು ಹೊರಡಿಸಿತ್ತು. ಆದರೆ ಈಗ ಅದನ್ನು ರದ್ದು ಪಡಿಸಿ ದಾಸನಪುರ ಉಪಮಾರುಕಟ್ಟೆಯಲ್ಲಿ ಮಳಿಗೆ ಪಡೆದು ಯಶವಂತಪುರ ಎ.ಪಿ.ಎಂ.ಸಿ.ಯಲ್ಲಿ ಮಳಿಗೆ ಪಡೆದವರಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದೆ. ಅಧಿಕಾರಿಗಳು ತಾವೇ ಹೊರಡಿಸಿದ ಅದೇಶವನ್ನು 15 ದಿನಗಳಲ್ಲಿಯೇ ವಾಪಸ್ ತೆಗೆದುಕೊಂಡು ವರ್ತಕರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ’ ಎಂದು ದಾಸನಪುರ ವರ್ತಕರ ಸಂಘದ ಅಧ್ಯಕ್ಷ ಶ್ರೀರಾಮ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.