ಪ್ರಕರಣವೇನು?: ‘ನಂಜನಗೂಡು ತಾಲ್ಲೂಕಿನ ಗೊದ್ದನಪುರ ಗ್ರಾಮದ ನಿವಾಸಿಗಳಿಗೆ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಮರಳೂರು ಗ್ರಾಮದ ಸರ್ವೇ ನಂಬರ್ 222ರಲ್ಲಿನ 17 ಎಕರೆ 26 ಗುಂಟೆ ಗೋಮಾಳದ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಮರಳೂರು ಗ್ರಾಮಸ್ಥರು ತಮ್ಮ ಜಾನುವಾರುಗಳ ಮೇವಿಗೆ ಈ ಜಮೀನನ್ನೇ ಅವಲಂಬಿಸಿದ್ದಾರೆ. ಗೊದ್ದನಪುರ ಗ್ರಾಮದಲ್ಲೇ ಸಾಕಷ್ಟು ಜಮೀನು ಇದ್ದು, ಅದನ್ನು ನಿವೇಶನ ಹಂಚಿಕೆಗೆ ಬಳಸಬಹುದು. ಆದ್ದರಿಂದ ಮರಳೂರು ಗ್ರಾಮದ ಗೋಮಾಳ ಜಮೀನನ್ನು ಮೇವಿಗಾಗಿ ಮೀಸಲಿಡಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.