ನಾಗರಬಾವಿ ನಿವಾಸಿಗಳಾದ ಎಸ್. ಗುಂಡಪ್ಪ ಮತ್ತು ವಿ. ಶಿವಮೂರ್ತಿ ಎಂಬುವರು ಅರ್ಜಿ ಸಲ್ಲಿಸಿದ್ದರು. ‘ನಾಗರಬಾವಿಯ ಎರಡು ಮುಖ್ಯ ರಸ್ತೆಯ ಬಳಿ ಖಾಸಗಿ ಪ್ರಯೋಗಾಲಯ ತೆರೆಯಲಾಗಿದೆ. ಸುತ್ತಮುತ್ತ 51 ಮನೆಗಳಿವೆ. ಪ್ರಯೋಗಾಲಯದ ಮುಂದೆ ದಿನವಿಡೀ ಜನ ಸರತಿಯಲ್ಲಿ ನಿಲ್ಲುತ್ತಿದ್ದಾರೆ.ಯಾವುದೇ ಸುರಕ್ಷತಾ ಕ್ರಮಗಳನ್ನುಕೈಗೊಂಡಿಲ್ಲ’ ಎಂದು ಅರ್ಜಿದಾರರು ತಿಳಿಸಿದ್ದಾರೆ.